-
ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು | Avishranta Dhyeyajeevi
ರಾಷ್ಟ್ರೋತ್ಥಾನ ಪರಿಷತ್ತಿನ ರೂವಾರಿ ಹಾಗೂ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ. ಚ. ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’. ಲೇಖಕರು: ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೇಳೂರು ಸುದರ್ಶನ. ಪುಸ್ತಕವನ್ನು ಆನ್ಲೈನ್ನಲ್ಲಿ ಖರೀದಿಸಿ.
₹180.00₹200.00 -
ಗೀತಾಂತರಂಗ | Geetantaranga (ಮಹಾಭಾಗವತ ಡಾ|| ಕುರ್ತಕೋಟಿ ಶಂಕರಾಚಾರ್ಯರು)
ಭಗವದ್ಗೀತೆ ಎಂದರೆ ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ನಮ್ಮ ಜೀವನದ ದಾರಿ ದೀಪ. ಗೀತೆಯ ಶ್ಲೋಕಗಳ ಹಿಂದೆ ಇರುವ ನಿಜವಾದ ಅಂತರಾರ್ಥವನ್ನು ಅತ್ಯಂತ ಸುಲಭವಾಗಿ ಮತ್ತು ಕಲಾತ್ಮಕವಾಗಿ ಬಿಡಿಸಿಡುವ ಅದ್ಭುತ ಕೃತಿಯೇ ‘ಗೀತಾಂತರಂಗ’.
₹180.00₹200.00 -
ಸಾಹಿತ್ಯ ಸಾನ್ನಿಹಿತ್ಯ : ಗ್ರಂಥಸಮೀಕ್ಷಾ ಪ್ರಬಂಧಗಳು – ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಸಾಹಿತ್ಯ ಸಾನ್ನಿಹಿತ್ಯ
ಲೇಖಕರು: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
‘ಸಾಹಿತ್ಯ ಸಾನ್ನಿಹಿತ್ಯ’ವು ಎಸ್. ಆರ್. ರಾಮಸ್ವಾಮಿ ಅವರು ಬರೆದಿರುವ ಮಹತ್ವದ ಗ್ರಂಥಸಮೀಕ್ಷಾ ಪ್ರಬಂಧಗಳ ಸಂಗ್ರಹವಾಗಿದೆ. ಸಮಾಜಸ್ಥಿತಿ, ಇತಿಹಾಸ, ಧಾರ್ಮಿಕ ಪರಂಪರೆ, ಅನುಭಾವಿ ವಾಙ್ಮಯ ಮತ್ತು ಅಪೂರ್ವ ಕಾದಂಬರಿಗಳಂತಹ ಗಂಭೀರ ವಿಷಯಗಳನ್ನು ಒಳಗೊಂಡ ಆಯ್ದ ಪುಸ್ತಕಗಳ ಪರಿಚಯವನ್ನು ಈ ಕೃತಿ ಮಾಡಿಕೊಡುತ್ತದೆ. ವಿಚಾರಶೀಲ ಓದುಗರಿಗೆ ಮತ್ತು ವಿಶಿಷ್ಟ ಮನನಸಾಮಗ್ರಿಯನ್ನು ಅರಸುವವರಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿ.
₹180.00₹200.00 -
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.
₹144.00₹160.00ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹144.00₹160.00 -
ಸಾಹಿತ್ಯ ಮತ್ತು ಜೀವನಕಲೆ | Sahitya Mattu Jeevanakale – Rallapalli Anantakrishna Sharma
ಭಾಷೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳ ಧೀಮಂತ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ ಅವರ ವೈಚಾರಿಕ ಪ್ರಬಂಧಗಳು ಹಾಗೂ ಭಾಷಣಗಳ ಅಪೂರ್ವ ಸಂಕಲನವೇ ‘ಸಾಹಿತ್ಯ ಮತ್ತು ಜೀವನಕಲೆ’. ಸಾಹಿತ್ಯದ ಸೌಂದರ್ಯ ಹಾಗೂ ಬದುಕಿನ ಸತ್ಯಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯು ಪ್ರತಿಯೊಬ್ಬ ಕನ್ನಡ ಓದುಗನೂ ಸಂಗ್ರಹಿಸಬೇಕಾದ ಅಮೂಲ್ಯ ಪುಸ್ತಕ.
₹135.00₹150.00 -
ಕ್ರಾಂತಿಯ ಕಿಡಿಗಳು – ದು. ಗು. ಲಕ್ಷ್ಮಣ | Krantiya Kidigalu – Du Gu Lakshmana
ದು. ಗು. ಲಕ್ಷ್ಮಣ ಅವರು ರಚಿಸಿರುವ, ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪ್ರಕಟಣೆ ‘ಕ್ರಾಂತಿಯ ಕಿಡಿಗಳು’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯವಾಗಿ ನಡೆದುಹೋದ ಸಣ್ಣ-ಪುಟ್ಟ ಪ್ರತಿರೋಧಗಳು ಮತ್ತು ಅಸಂಖ್ಯ ವೀರರ ತ್ಯಾಗ-ಬಲಿದಾನಗಳನ್ನು ಅನಾವರಣಗೊಳಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸುತ್ತದೆ.
₹120.00₹150.00 -
ಪರಿಸರ ಪರ | Parisara Para Kannada Book By Narayana Shevire
ಪುಸ್ತಕದ ಹೆಸರು: ಪರಿಸರ ಪರ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಪರಿಸರ, ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ವೃಕ್ಷಾರೋಪಣ, ಪರಿಸರ ದಿನ ಆಚರಣೆ – ಹೀಗೆ ದಿನವೂ ಪರಿಸರ-ಸಂಬಂಧಿತ ಒಂದಲ್ಲ ಒಂದು ವಿಷಯ-ಸುದ್ದಿ ಕಿವಿಗೆ ಬೀಳುತ್ತಿರುವ ವರ್ತಮಾನದಲ್ಲಿ ನಮಗೆ ಅನುಸರಣೀಯವಾದ ದೃಷ್ಟಿ-ಧೋರಣೆ ಯಾವುದು?- ಎಂಬುದನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಅಂಥದ್ದೊಂದು ಚಿಂತನೆಗೆ ತೊಡಗಲು ಒದಗಿಬರಬಹುದಾದ, ಪರಿಸರ ಸಂಬಂಧಿತ, ಲೇಖನಗಳ ಸಂಕಲನ ‘ಪರಿಸರ ಪರ’.₹108.00₹120.00ಪರಿಸರ ಪರ | Parisara Para Kannada Book By Narayana Shevire
₹108.00₹120.00 -
ಪಾಠಶಾಲೆ | Patashale Kannada Book By Narayana Shevire
ಪುಸ್ತಕದ ಹೆಸರು: ಪಾಠಶಾಲೆ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.₹108.00₹120.00ಪಾಠಶಾಲೆ | Patashale Kannada Book By Narayana Shevire
₹108.00₹120.00 -
ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್.ಆರ್. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.
₹108.00₹120.00ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
₹108.00₹120.00 -
ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ
ಲೇಖಕರು: ಕ. ವೆಂ. ನಾಗರಾಜ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.
₹100.00 -
ಭಾರತೀಯ ಸ್ವಾತಂತ್ರ್ಯಸಂಗ್ರಾಮ: ತಾತ್ತ್ವಿಕ ಭೂಮಿಕೆ; ಸಂಘರ್ಷದ ವಾರಸಿಕೆ | ನಾರಾಯಣ ಶೇವಿರೆ | ಎಂ.ಎನ್. ರವೀಂದ್ರ
ಪುಸ್ತಕದ ಹೆಸರು: ಭಾರತೀಯ ಸ್ವಾತಂತ್ರ್ಯಸಂಗ್ರಾಮ
ಲೇಖಕರು: ನಾರಾಯಣ ಶೇವಿರೆ, ಎಂ.ಎನ್. ರವೀಂದ್ರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಭಾರತದ ಸ್ವಾತಂತ್ರ್ಯ ಹೋರಾಟವು ಕೇವಲ ಭೌಗೋಳಿಕ ಗಡಿಗಳ ರಕ್ಷಣೆಗಾಗಿ ನಡೆದ ರಾಜಕೀಯ ಸಂಘರ್ಷವಲ್ಲ; ಅದು ನಮ್ಮ ಸನಾತನ ಸಂಸ್ಕೃತಿ, ಸಭ್ಯತೆ ಮತ್ತು ಧರ್ಮದ ಉಳಿವಿಗಾಗಿ ಶತಶತಮಾನಗಳಿಂದ ನಡೆದ ನಿರಂತರ ತಾತ್ತ್ವಿಕ ಹೋರಾಟ. ಜೀವ ಮತ್ತು ಜಗತ್ತಿನ ಆತ್ಯಂತಿಕ ಸತ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಡೆದ ಈ ಸುದೀರ್ಘ ವಾರಸಿಕೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅತ್ಯಮೂಲ್ಯ ಐತಿಹಾಸಿಕ ಕೃತಿ ಇದಾಗಿದೆ. ಇತಿಹಾಸಾಸಕ್ತರಿಗೆ ಹಾಗೂ ನಮ್ಮ ಪರಂಪರೆಯನ್ನು ಅರಿಯಬಯಸುವ ಪ್ರತಿಯೊಬ್ಬರಿಗೂ ಇದೊಂದು ಅತ್ಯುತ್ತಮ ಮಾರ್ಗದರ್ಶಿ.
₹100.00 -
Importance of Rewriting Our Distorted Indian History – By Manjunatha Ajjampura
A powerful and concise book that exposes how colonial rulers and later Marxist scholars distorted India’s history. Written by Manjunatha Ajjampura, this work urges readers to rediscover true Indian history based on evidence, inscriptions, scriptures, and cultural heritage.
₹90.00₹100.00 -
ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ ಇತಿಹಾಸ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಳೆದ ಒಂದು ಶತಮಾನದಿಂದ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ವಿಕೃತಗೊಂಡಿರುವ ಭಾರತದ ಇತಿಹಾಸವನ್ನು ನೈಜ ಸಾಕ್ಷ್ಯಾಧಾರಗಳು, ಶಿಲಾ ಶಾಸನಗಳು ಹಾಗೂ ಆಸ್ಥಾನ ಇತಿಹಾಸಕಾರರ ದಾಖಲೆಗಳ ಮೂಲಕ ಮರುಕಟ್ಟುವ ಮಹತ್ವದ ಕೃತಿ ‘ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ’. ಮಂಜುನಾಥ ಅಜ್ಜಂಪುರ ಅವರು ರಚಿಸಿರುವ ಈ ಪುಸ್ತಕವು, ನಮ್ಮದು ಸೋತ ಸಮಾಜವಲ್ಲ, ಬದಲಾಗಿ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೇಷ್ಠ ಸಂಸ್ಕೃತಿ ಎಂಬುದನ್ನು ಸತ್ಯದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
₹90.00₹100.00ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
₹90.00₹100.00 -
ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.
₹20.00
