ಕ್ರಾಂತಿಯ ಕಿಡಿಗಳು – ದು. ಗು. ಲಕ್ಷ್ಮಣ | Krantiya Kidigalu – Du Gu Lakshmana
₹120.00₹150.00 (-20%)
ದು. ಗು. ಲಕ್ಷ್ಮಣ ಅವರು ರಚಿಸಿರುವ, ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪ್ರಕಟಣೆ ‘ಕ್ರಾಂತಿಯ ಕಿಡಿಗಳು’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯವಾಗಿ ನಡೆದುಹೋದ ಸಣ್ಣ-ಪುಟ್ಟ ಪ್ರತಿರೋಧಗಳು ಮತ್ತು ಅಸಂಖ್ಯ ವೀರರ ತ್ಯಾಗ-ಬಲಿದಾನಗಳನ್ನು ಅನಾವರಣಗೊಳಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸುತ್ತದೆ.
Frequently Bought Together
- This item: ಕ್ರಾಂತಿಯ ಕಿಡಿಗಳು - ದು. ಗು. ಲಕ್ಷ್ಮಣ | Krantiya Kidigalu - Du Gu Lakshmana(₹120.00
₹150.00(-20%)) - ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್(₹135.00
₹150.00) - ಆನಂದಮಠ - ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಅನುವಾದ: ಎಸ್. ಆರ್. ರಾಮಸ್ವಾಮಿ) | Anandamatha Kannada Book by Bankim Chandra Chattopadhyay, Translated by S.R. Ramaswamy(₹198.00
₹220.00) - ಕನ್ನಡದ ಕಡುಗಲಿಗಳು(₹84.00
₹120.00)
Description
ಭಾರತದ ಸ್ವಾತಂತ್ರ್ಯಕ್ಕಾಗಿ ಹಲವು ಸ್ತರಗಳಲ್ಲಿ, ಹಲವು ಮಜಲುಗಳಲ್ಲಿ ಹೋರಾಟ ನಡೆದಿದೆ. ಅಸಂಖ್ಯ ದೇಶಪ್ರೇಮಿಗಳು ತಮ್ಮ ತಮ್ಮ ಮಿತಿ ಹಾಗೂ ವ್ಯಾಪ್ತಿಯಲ್ಲಿ ಹೋರಾಡಿ, ಅತ್ಯಂತಿಕ ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಸಾಮ್ರಾಜ್ಯಶಾಹಿ ಆಡಳಿತವನ್ನು ಎದುರಿಸಲು ವೈಯಕ್ತಿಕ ನೆಲೆಯಲ್ಲಿ ನಡೆದ ಇಂತಹ ಸಣ್ಣ-ಪುಟ್ಟ ಪ್ರತಿರೋಧಗಳೇ ಮಹತ್ತರ ಭೂಮಿಕೆಯನ್ನು ರೂಪಿಸಿದವು. ಹನಿ ಹನಿ ಕೂಡಿಯೇ ಪ್ರವಾಹವಾಗುವಂತೆ, ಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಹೋರಾಟವೇ ಕ್ರಮೇಣ ಬ್ರಿಟಿಷರನ್ನು ಹೊಡೆದೋಡಿಸಿದ ಹೆದ್ದಾರಿಯಾಯಿತು.
ಈ ಕೃತಿಯಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತಿಯೊಬ್ಬ ಸ್ವಾತಂತ್ರ್ಯಯೋಧನೂ ಅಮರಸೇನಾನಿಯಾಗಿ ಕಂಗೊಳಿಸುತ್ತಾನೆ. ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ತೆತ್ತ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ತರಬೇಕಾದ ‘ಬೆಲೆ’ ಏನು ಎಂಬುದರ ಸ್ಪಷ್ಟ ಅರಿವನ್ನು ಈ ಪುಸ್ತಕ ಮೂಡಿಸುತ್ತದೆ.
-
ಪುಸ್ತಕದ ಹೆಸರು: ಕ್ರಾಂತಿಯ ಕಿಡಿಗಳು
-
ಲೇಖಕರು: ದು. ಗು. ಲಕ್ಷ್ಮಣ
-
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
-
ಭಾಷೆ: ಕನ್ನಡ
-
ವಿಷಯ: ಸ್ವಾತಂತ್ರ್ಯ ಹೋರಾಟ, ದೇಶಭಕ್ತಿ, ಇತಿಹಾಸ
India’s journey to independence was built on countless sacrifices, resistance, and grassroots struggles across different regions. While major events dominate history, it was the small, localized resistances by unsung freedom fighters that laid the strong foundation to overthrow imperial rule. Just as small drops form a mighty river, these individual efforts paved the way for national liberation.
Krantiya Kidigalu, written by acclaimed author Du. Gu. Lakshmana and published by Rashtrotthana Sahitya, portrays these courageous freedom fighters as immortal heroes. The book evokes deep patriotism and reminds us of the true price paid for our nation’s freedom.
Specification
Additional information
| author-name | |
|---|---|
| book-no | 188 |
| isbn | 9789393991317 |
| language | Kannada |
| published-date | August 11, 2026 |














Reviews
There are no reviews yet.