ಸಾಹಿತ್ಯ ಸಾನ್ನಿಹಿತ್ಯ : ಗ್ರಂಥಸಮೀಕ್ಷಾ ಪ್ರಬಂಧಗಳು – ಎಸ್. ಆರ್. ರಾಮಸ್ವಾಮಿ
₹180.00₹200.00 (-10%)
ಪುಸ್ತಕದ ಹೆಸರು: ಸಾಹಿತ್ಯ ಸಾನ್ನಿಹಿತ್ಯ
ಲೇಖಕರು: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
‘ಸಾಹಿತ್ಯ ಸಾನ್ನಿಹಿತ್ಯ’ವು ಎಸ್. ಆರ್. ರಾಮಸ್ವಾಮಿ ಅವರು ಬರೆದಿರುವ ಮಹತ್ವದ ಗ್ರಂಥಸಮೀಕ್ಷಾ ಪ್ರಬಂಧಗಳ ಸಂಗ್ರಹವಾಗಿದೆ. ಸಮಾಜಸ್ಥಿತಿ, ಇತಿಹಾಸ, ಧಾರ್ಮಿಕ ಪರಂಪರೆ, ಅನುಭಾವಿ ವಾಙ್ಮಯ ಮತ್ತು ಅಪೂರ್ವ ಕಾದಂಬರಿಗಳಂತಹ ಗಂಭೀರ ವಿಷಯಗಳನ್ನು ಒಳಗೊಂಡ ಆಯ್ದ ಪುಸ್ತಕಗಳ ಪರಿಚಯವನ್ನು ಈ ಕೃತಿ ಮಾಡಿಕೊಡುತ್ತದೆ. ವಿಚಾರಶೀಲ ಓದುಗರಿಗೆ ಮತ್ತು ವಿಶಿಷ್ಟ ಮನನಸಾಮಗ್ರಿಯನ್ನು ಅರಸುವವರಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿ.
Description
ಪುಸ್ತಕಗಳನ್ನು ಓದುವ ಹವ್ಯಾಸವಿರುವವರಲ್ಲಿ ವಿಚಾರಶೀಲರಾದವರು ತಮ್ಮ ಓದಿನಿಂದ ವಿಶಿಷ್ಟ ಮನನಸಾಮಗ್ರಿ ಸಿಗಬೇಕೆಂದು ಬಯಸುತ್ತಾರೆ. ಇಂತಹವರ ಲಕ್ಷ್ಯದಿಂದ ಇವರಿಗೆ ಆಸಕ್ತಿಕರಗಳಾದ ಎಷ್ಟೋ ಪುಸ್ತಕಗಳು ಈಗಿನ ಪರಿಸರದಲ್ಲಿ ದೂರ ಉಳಿದುಬಿಡುವುದು ಅಸಂಭವವಲ್ಲ. ಗಂಭೀರ ವಿಷಯಾಸಕ್ತರ ತೀಕ್ಷ್ಯ ಪರಿಶೀಲನೆಗೆ ಅರ್ಹವೆಂದು ಭಾವಿಸಲಾದ ಕೆಲವು ಆಯ್ದ ಪುಸ್ತಕಗಳನ್ನು ಓದುಗರ ಕಣ್ಯಾಪಿನಲ್ಲಿ ಉಳಿಸಲು ಅಧಿಕ ಪ್ರಯತ್ನದ ಆವಶ್ಯಕತೆ ಇದೆ. ಆ ದಿಕ್ಕಿನ ಹಲವು ಗ್ರಂಥಪರಿಚಯ ಪ್ರಬಂಧಗಳ ಸಂಗ್ರಹ ಇದು. ಸಮಾಜಸ್ಥಿತಿಯ ಅವಲೋಕನ, ಇತಿಹಾಸ, ಧಾರ್ಮಿಕ ಪರಂಪರೆ, ಪಾಪ-ಪುಣ್ಯ, ಅನುಭಾವಿ ವಾಹ್ಮಯ, ಅಪೂರ್ವ ಕಾದಂಬರಿಗಳು-ಹೀಗೆ ಹಲವು ಪ್ರಕಾರಗಳ ಗಣನೀಯ ಗ್ರಂಥಗಳ ಸಮೀಕ್ಷೆಯ ಜೊತೆಗೆ ಆ ಗ್ರಂಥಗಳ ಕೇಂದ್ರವಿಷಯದ ಹಾಸು-ಹರವಿನ ಪರಿಚಯ-ಹೀಗೆ ವಿನ್ಯಾಸಗೊಂಡ ಬರಹಗಳ ಸಂಕಲನ ‘ಸಾಹಿತ್ಯ ಸಾನ್ನಿಹಿತ್ಯ’.
ಪುಸ್ತಕದ ಪ್ರಮುಖ ಆಕರ್ಷಣೆಗಳು:
-
ವೈವಿಧ್ಯಮಯ ವಿಷಯಗಳ ಸಂಗ್ರಹ: ಸಮಾಜಸ್ಥಿತಿಯ ಅವಲೋಕನ, ಇತಿಹಾಸ, ಧಾರ್ಮಿಕ ಪರಂಪರೆ, ಪಾಪ-ಪುಣ್ಯದ ಕಲ್ಪನೆಗಳು, ಅನುಭಾವಿ ವಾಙ್ಮಯ, ಹಾಗೂ ಅಪೂರ್ವ ಕಾದಂಬರಿಗಳಂತಹ ಹಲವು ಪ್ರಕಾರಗಳ ವಿಶ್ಲೇಷಣೆ ಇಲ್ಲಿದೆ.
-
ಆಳವಾದ ಗ್ರಂಥಸಮೀಕ್ಷೆ: ಕೇವಲ ಪುಸ್ತಕದ ಮೇಲ್ನೋಟದ ಪರಿಚಯವಷ್ಟೇ ಅಲ್ಲದೆ, ಗಣನೀಯ ಗ್ರಂಥಗಳ ಸಮೀಕ್ಷೆಯ ಜೊತೆಗೆ ಆ ಗ್ರಂಥಗಳ ಕೇಂದ್ರವಿಷಯದ ಹಾಸು-ಹರವಿನ ಪರಿಚಯವನ್ನು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
-
ವಿಚಾರಶೀಲರಿಗೆ ಸೂಕ್ತ: ಹೊಸ ಆಲೋಚನೆಗಳಿಗೆ ನಾಂದಿ ಹಾಡುವ ಮತ್ತು ಓದುಗರ ಗ್ರಹಿಕೆಯನ್ನು ವಿಸ್ತರಿಸುವ ಅತ್ಯುತ್ತಮ ಪ್ರಬಂಧಗಳ ಸಂಕಲನವಿದು.
ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ಸಾಹಿತ್ಯಾಸಕ್ತರ ಸಂಗ್ರಹದಲ್ಲಿ ಇರಲೇಬೇಕಾದ ಕೃತಿ.
Specification
Additional information
| Weight | 254 g |
|---|---|
| Dimensions | 21.5 × 14.1 × 1 cm |
| author-name | |
| isbn | 9789393991911 |
| language | Kannada |
| moola | 172 |
| published-date | October 2023 |












