ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು | Avishranta Dhyeyajeevi
₹180.00₹200.00 (-10%)
ರಾಷ್ಟ್ರೋತ್ಥಾನ ಪರಿಷತ್ತಿನ ರೂವಾರಿ ಹಾಗೂ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ. ಚ. ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’. ಲೇಖಕರು: ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೇಳೂರು ಸುದರ್ಶನ. ಪುಸ್ತಕವನ್ನು ಆನ್ಲೈನ್ನಲ್ಲಿ ಖರೀದಿಸಿ.
Description
ಶ್ರೀ ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧೈಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು – ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಅಮೃತ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್.
Avishranta Dhyeyajeevi Mai Cha Jaideva: baduku -nenapu is a powerful biographical tribute to Sri M.C. Jayadeva, a masterful organizer and an exceptionally efficient leader who nurtured the Rashtrotthana Parishat from its very inception in 1965. Throughout his life, he embodied the philosophy of a singular, unwavering mission. Driven by visionary thinking, deep-rooted nationalistic duty, and relentless hard work, his efforts established the steady and progressive foundation required to build a healthier society.
A Lifetime of Dedication to the RSS: For over 50 years, Sri Jayadeva played a pivotal role in strengthening the grassroots of the Rashtriya Swayamsevak Sangh (RSS) in Karnataka. His dynamic leadership spanned numerous critical responsibilities, including:
- Bangalore Mahanagara Karyavaha
- Pranta Karyavaha & Kshetriya Karyavaha
- Kshetriya Pracharak
- Invitee Member of the Akhila Bharatiya Karyakarini (All India Executive Committee)
A Guiding Light for Social Institutions: Beyond his direct organizational roles, Sri Jayadeva stood as a silent powerhouse and an invaluable mentor for several prominent social and cultural institutions across Bengaluru. He successfully guided and empowered:
- The Mythic Society
- Gokhale Institute of Public Affairs
- Amrutha Sishu Nivasa
- Abalashrama
Working tirelessly behind the scenes, he inspired these core organizations to operate independently and fulfill their primary objectives, while masterfully managing the crucial alignment of systems and the right individuals.
Why You Should Read This Book: This intricately detailed biography not only chronicles the journey of a deeply committed individual but also serves as a masterclass in leadership, institution building, and public service. It is an essential read for anyone looking to draw immense inspiration from a life dedicated entirely to the nation’s progress.
Specification
Additional information
| author-name | |
|---|---|
| book-no | 186 |
| isbn | 9789393991348 |
| language | Kannada |
| no-of-pages | 261 |













by Praveen Chandra Puttur
‘ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು’ ಪುಸ್ತಕವು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ; ಅದೊಂದು ನಿಸ್ವಾರ್ಥ ಸಮಾಜ ಸೇವೆ ಮತ್ತು ಸಂಸ್ಥೆಗಳನ್ನು ಶೂನ್ಯದಿಂದ ಹೇಗೆ ಕಟ್ಟಿ ಬೆಳೆಸಬೇಕು ಎಂಬುದನ್ನು ಕಲಿಸಿಕೊಡುವ ಜೀವಂತ ಪಾಠಶಾಲೆ. 1965 ರ ಆರಂಭದ ದಿನಗಳಿಂದಲೇ ರಾಷ್ಟ್ರೋತ್ಥಾನ ಪರಿಷತ್ತನ್ನು ಇಂದಿನ ಹೆಮ್ಮರವಾಗಿಸುವಲ್ಲಿ ಶ್ರೀ ಮೈ.ಚ. ಜಯದೇವ ಅವರು ವಹಿಸಿದ ಪಾತ್ರ, ಅವರ ಅಸಾಮಾನ್ಯ ವ್ಯವಸ್ಥಾಕುಶಲತೆ ಮತ್ತು ಕಠಿಣ ಪರಿಶ್ರಮ ಪ್ರತಿಯೊಂದು ಪುಟದಲ್ಲೂ ಓದುಗರನ್ನು ಬೆರಗುಗೊಳಿಸುತ್ತದೆ. ಆರ್ಎಸ್ಎಸ್ನ ವಿವಿಧ ಜವಾಬ್ದಾರಿಗಳನ್ನು ಐದು ದಶಕಗಳಿಗೂ ಹೆಚ್ಚು ಕಾಲ ನಿರ್ವಹಿಸುತ್ತಾ, ಸಂಘದ ಬೇರುಗಳನ್ನು ಗಟ್ಟಿಗೊಳಿಸಿದ ಅವರ ರಾಷ್ಟ್ರನಿಷ್ಠೆ ನಮಗೆಲ್ಲರಿಗೂ ಮಾದರಿ. ಬೆಂಗಳೂರಿನ ಮಿಥಿಕ್ ಸೊಸೈಟಿ, ಗೋಖಲೆ ಸಂಸ್ಥೆ, ಅಮೃತ ಶಿಶುನಿವಾಸ ಹಾಗೂ ಅಬಲಾಶ್ರಮದಂತಹ ಪ್ರಮುಖ ಸಾಮಾಜಿಕ ಸಂಸ್ಥೆಗಳು ಸ್ವತಂತ್ರವಾಗಿ ಬೆಳೆಯಲು ಅವರು ತೆರೆಯ ಹಿಂದೆ ನಿಂತು ಮೌನವಾಗಿ ಮಾಡಿದ ವ್ಯಕ್ತಿ-ವ್ಯವಸ್ಥೆ ಜೋಡಣೆಯ ಕಾರ್ಯ ನಿಜಕ್ಕೂ ರೋಮಾಂಚನಕಾರಿ. ಪ್ರಚಾರದ ಆಸೆ ಇಲ್ಲದೆ, ಯಶಸ್ಸಿನ ಕೀರ್ತಿಯನ್ನು ಸಮಾಜಕ್ಕೆ ನೀಡಿ, ತಾವೊಬ್ಬ ಧ್ಯೇಯಜೀವಿಯಾಗಿ ಬಾಳಿದ ಅವರ ಈ ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ಕರ್ತವ್ಯ ಪ್ರಜ್ಞೆ ಮತ್ತು ನಾಯಕತ್ವದ ಗುಣಗಳನ್ನು ಕಲಿಸುತ್ತದೆ. ಪುಸ್ತಕದ ಲೇಖನ ಶೈಲಿ ಅತ್ಯಂತ ಸರಳ ಹಾಗೂ ಪ್ರಭಾವಶಾಲಿಯಾಗಿದ್ದು, ರಾಷ್ಟ್ರೋತ್ಥಾನ ಸಾಹಿತ್ಯದ ಮುದ್ರಣ ಮತ್ತು ಬೈಂಡಿಂಗ್ ಗುಣಮಟ್ಟ ಎಂದಿನಂತೆ ಅತ್ಯುನ್ನತವಾಗಿದೆ. ದೇಶದ ಪ್ರಗತಿಗಾಗಿ ತಮ್ಮ ಇಡೀ ಬದುಕನ್ನು ಧಾರೆ ಎರೆದ ಮಹಾತ್ಮನೊಬ್ಬನ ಒಳನೋಟಗಳನ್ನು ತಿಳಿಯಲು ಈ ಪುಸ್ತಕವನ್ನು ಪ್ರತಿಯೊಬ್ಬರೂ ತಪ್ಪದೇ ಓದಬೇಕು ಮತ್ತು ತಮ್ಮ ಮನೆಯ ಲೈಬ್ರರಿಯಲ್ಲಿ ಇಟ್ಟುಕೊಳ್ಳಬೇಕು. ಖಂಡಿತವಾಗಿಯೂ ಇದೊಂದು ಮಸ್ಟ್-ರೀಡ್ ಪುಸ್ತಕ
by Reshma Shetty
‘ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು’ ಪುಸ್ತಕವು ಕೇವಲ ಒಂದು ಬಯಾಗ್ರಫಿ ಅಲ್ಲ, ಇದು ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾದ ಒಂದು ಪರ್ಫೆಕ್ಟ್ ಗೈಡ್ಬುಕ್. 1965ರಿಂದ ರಾಷ್ಟ್ರೋತ್ಥಾನ ಪರಿಷತ್ತನ್ನು ಇಂದಿನ ಎತ್ತರಕ್ಕೆ ತರಲು ಅವರು ಪಟ್ಟ ಶ್ರಮ ಮತ್ತು ಅವರ ದೂರದರ್ಶಿತ್ವ ಪ್ರತಿಯೊಂದು ಪುಟದಲ್ಲೂ ಎದ್ದು ಕಾಣುತ್ತದೆ. ಆರ್ಎಸ್ಎಸ್ನಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿದ ನಿಸ್ವಾರ್ಥ ಸೇವೆ ಹಾಗೂ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಅವರು ತೆರೆಯ ಹಿಂದೆ ನಿಂತು ನೀಡಿದ ಮಾರ್ಗದರ್ಶನ ನಿಜಕ್ಕೂ ಇನ್ಸ್ಪೈರಿಂಗ್ ಆಗಿದೆ. Highly recommended for anyone looking to draw immense inspiration from a life dedicated entirely to the nation’s progress. ಪುಸ್ತಕದ ಮುದ್ರಣ ಮತ್ತು ಬರಹದ ಶೈಲಿ ತುಂಬಾ ಚೆನ್ನಾಗಿದೆ
by Madhusingh G
ಸಂಘಟನಾ ಚತುರರೊಬ್ಬರ ಜೀವನದ ಒಳನೋಟಗಳನ್ನು ತುಂಬಾ ಚೆನ್ನಾಗಿ ದಾಖಲಾಗಿದೆ. ಓದುಗರಿಗೆ ಉತ್ತಮವಾದ ಪುಸ್ತಕವಾಗಿದೆ.🙏