-
ಕ್ರಾಂತಿಯ ಕಿಡಿಗಳು – ದು. ಗು. ಲಕ್ಷ್ಮಣ | Krantiya Kidigalu – Du Gu Lakshmana
ದು. ಗು. ಲಕ್ಷ್ಮಣ ಅವರು ರಚಿಸಿರುವ, ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪ್ರಕಟಣೆ ‘ಕ್ರಾಂತಿಯ ಕಿಡಿಗಳು’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯವಾಗಿ ನಡೆದುಹೋದ ಸಣ್ಣ-ಪುಟ್ಟ ಪ್ರತಿರೋಧಗಳು ಮತ್ತು ಅಸಂಖ್ಯ ವೀರರ ತ್ಯಾಗ-ಬಲಿದಾನಗಳನ್ನು ಅನಾವರಣಗೊಳಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸುತ್ತದೆ.
₹120.00₹150.00 -
ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.
₹20.00 -
Anti Hindus ಹಿಂದೂ ವಿರೋಧಿಗಳು – ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಹಿಂದು ವಿರೋಧಿಗಳು
ಮೂಲ: ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ
ಕನ್ನಡಕ್ಕೆ: ಬಿ. ಪಿ. ಪ್ರೇಮಕುಮಾರ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಭಾರತೀಯ ಇತಿಹಾಸ ಮತ್ತು ರಾಜಕೀಯದ ಸೂಕ್ಷ್ಮ ಮಗ್ಗುಲುಗಳನ್ನು ವಿಶ್ಲೇಷಿಸುವ, ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ ಅವರ ಪ್ರಸಿದ್ಧ ಕೃತಿ ‘Anti Hindus’ ನ ಕನ್ನಡ ಅನುವಾದ. ಸತ್ಯದ ಮೇಲಿರುವ ಅಸತ್ಯದ ಮುಸುಕನ್ನು ಸರಿಸಿ, ವಾಸ್ತವವನ್ನು ತೆರೆದಿಡುವ ಮತ್ತು ನಮ್ಮ ಸಾಂಸ್ಕೃತಿಕ ಜಾಗೃತಿಯನ್ನು ಹೆಚ್ಚಿಸುವ ಮಹತ್ವದ ಗ್ರಂಥವಿದು. ಕನ್ನಡಕ್ಕೆ ಬಿ.ಪಿ. ಪ್ರೇಮಕುಮಾರ್ ಅವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದಾರೆ.
₹320.00 -
ಗೀತಾಂತರಂಗ | Geetantaranga (ಮಹಾಭಾಗವತ ಡಾ|| ಕುರ್ತಕೋಟಿ ಶಂಕರಾಚಾರ್ಯರು)
ಭಗವದ್ಗೀತೆ ಎಂದರೆ ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ನಮ್ಮ ಜೀವನದ ದಾರಿ ದೀಪ. ಗೀತೆಯ ಶ್ಲೋಕಗಳ ಹಿಂದೆ ಇರುವ ನಿಜವಾದ ಅಂತರಾರ್ಥವನ್ನು ಅತ್ಯಂತ ಸುಲಭವಾಗಿ ಮತ್ತು ಕಲಾತ್ಮಕವಾಗಿ ಬಿಡಿಸಿಡುವ ಅದ್ಭುತ ಕೃತಿಯೇ ‘ಗೀತಾಂತರಂಗ’.
₹180.00₹200.00




