-
ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.
₹20.00 -
ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ ಇತಿಹಾಸ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಳೆದ ಒಂದು ಶತಮಾನದಿಂದ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ವಿಕೃತಗೊಂಡಿರುವ ಭಾರತದ ಇತಿಹಾಸವನ್ನು ನೈಜ ಸಾಕ್ಷ್ಯಾಧಾರಗಳು, ಶಿಲಾ ಶಾಸನಗಳು ಹಾಗೂ ಆಸ್ಥಾನ ಇತಿಹಾಸಕಾರರ ದಾಖಲೆಗಳ ಮೂಲಕ ಮರುಕಟ್ಟುವ ಮಹತ್ವದ ಕೃತಿ ‘ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ’. ಮಂಜುನಾಥ ಅಜ್ಜಂಪುರ ಅವರು ರಚಿಸಿರುವ ಈ ಪುಸ್ತಕವು, ನಮ್ಮದು ಸೋತ ಸಮಾಜವಲ್ಲ, ಬದಲಾಗಿ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೇಷ್ಠ ಸಂಸ್ಕೃತಿ ಎಂಬುದನ್ನು ಸತ್ಯದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
₹90.00₹100.00ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
₹90.00₹100.00 -
ಸಾಹಿತ್ಯ ಮತ್ತು ಜೀವನಕಲೆ | Sahitya Mattu Jeevanakale – Rallapalli Anantakrishna Sharma
ಭಾಷೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳ ಧೀಮಂತ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ ಅವರ ವೈಚಾರಿಕ ಪ್ರಬಂಧಗಳು ಹಾಗೂ ಭಾಷಣಗಳ ಅಪೂರ್ವ ಸಂಕಲನವೇ ‘ಸಾಹಿತ್ಯ ಮತ್ತು ಜೀವನಕಲೆ’. ಸಾಹಿತ್ಯದ ಸೌಂದರ್ಯ ಹಾಗೂ ಬದುಕಿನ ಸತ್ಯಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯು ಪ್ರತಿಯೊಬ್ಬ ಕನ್ನಡ ಓದುಗನೂ ಸಂಗ್ರಹಿಸಬೇಕಾದ ಅಮೂಲ್ಯ ಪುಸ್ತಕ.
₹135.00₹150.00 -
ಗೀತಾಂತರಂಗ | Geetantaranga (ಮಹಾಭಾಗವತ ಡಾ|| ಕುರ್ತಕೋಟಿ ಶಂಕರಾಚಾರ್ಯರು)
ಭಗವದ್ಗೀತೆ ಎಂದರೆ ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ನಮ್ಮ ಜೀವನದ ದಾರಿ ದೀಪ. ಗೀತೆಯ ಶ್ಲೋಕಗಳ ಹಿಂದೆ ಇರುವ ನಿಜವಾದ ಅಂತರಾರ್ಥವನ್ನು ಅತ್ಯಂತ ಸುಲಭವಾಗಿ ಮತ್ತು ಕಲಾತ್ಮಕವಾಗಿ ಬಿಡಿಸಿಡುವ ಅದ್ಭುತ ಕೃತಿಯೇ ‘ಗೀತಾಂತರಂಗ’.
₹180.00₹200.00 -
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹250.00 -
ಗಾನಕಲೆ | Gaanakale | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
ಪುಸ್ತಕದ ಹೆಸರು: ಗಾನಕಲೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ20ನೇ ಶತಮಾನದ ಶ್ರೇಷ್ಠ ಸಂಗೀತಜ್ಞ ಹಾಗೂ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ರಚಿಸಿದ ‘ಗಾನಕಲೆ’ ಕೃತಿಯು, ಸಂಗೀತಗಾರರು ಮತ್ತು ಸಂಗೀತಶಾಸ್ತ್ರದ ಕುರಿತಾದ 23 ಲೇಖನಗಳ ಅಮೂಲ್ಯ ಸಂಕಲನವಾಗಿದೆ. ದಕ್ಷಿಣಾದಿ-ಉತ್ತರಾದಿ ಸಂಗೀತ, ಹೊಸ ಪ್ರಯೋಗಗಳು, ಹಾಗೂ ಸಂಗೀತದಲ್ಲಿ ಸೌಂದರ್ಯ ಮತ್ತು ಭಾಷೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುವ ಈ ಕೃತಿಯು ಸಂಗೀತಾಸಕ್ತರಿಗೆ, ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ.
₹270.00₹300.00ಗಾನಕಲೆ | Gaanakale | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
₹270.00₹300.00 -
Anti Hindus ಹಿಂದೂ ವಿರೋಧಿಗಳು – ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಹಿಂದು ವಿರೋಧಿಗಳು
ಮೂಲ: ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ
ಕನ್ನಡಕ್ಕೆ: ಬಿ. ಪಿ. ಪ್ರೇಮಕುಮಾರ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಭಾರತೀಯ ಇತಿಹಾಸ ಮತ್ತು ರಾಜಕೀಯದ ಸೂಕ್ಷ್ಮ ಮಗ್ಗುಲುಗಳನ್ನು ವಿಶ್ಲೇಷಿಸುವ, ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ ಅವರ ಪ್ರಸಿದ್ಧ ಕೃತಿ ‘Anti Hindus’ ನ ಕನ್ನಡ ಅನುವಾದ. ಸತ್ಯದ ಮೇಲಿರುವ ಅಸತ್ಯದ ಮುಸುಕನ್ನು ಸರಿಸಿ, ವಾಸ್ತವವನ್ನು ತೆರೆದಿಡುವ ಮತ್ತು ನಮ್ಮ ಸಾಂಸ್ಕೃತಿಕ ಜಾಗೃತಿಯನ್ನು ಹೆಚ್ಚಿಸುವ ಮಹತ್ವದ ಗ್ರಂಥವಿದು. ಕನ್ನಡಕ್ಕೆ ಬಿ.ಪಿ. ಪ್ರೇಮಕುಮಾರ್ ಅವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದಾರೆ.
₹320.00 -
ನೋಸ್ತ್ರಾದಾಮಸ್ ಭವಿಷ್ಯವಾಣಿ: ಉಳಿಯುವುದೊಂದೇ ಹಿಂದೂ ಧರ್ಮ | Nostradamus & Hindu Sway | ಜಿ. ಎಸ್. ಹಿರಣ್ಯಪ್ಪ | ಮಂಜುನಾಥ ಭಟ್ | ಡಾ. ಜಿ.ಬಿ. ಹರೀಶ
ಪುಸ್ತಕದ ಹೆಸರು: ನೋಸ್ತ್ರಾದಾಮಸ್ ಭವಿಷ್ಯವಾಣಿ
ಲೇಖಕರು: ಜಿ.ಎಸ್. ಹಿರಣ್ಯಪ್ಪ
ಸಂಗ್ರಹಾನುವಾದ: ಮಂಜುನಾಥ ಭಟ್
ಸಂಪಾದಕರು: ಡಾ. ಜಿ. ಬಿ. ಹರೀಶ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಫ್ರೆಂಚ್ ಕಾಲಜ್ಞಾನಿ ನೋಸ್ತ್ರಾದಾಮಸ್ನ ಭವಿಷ್ಯವಾಣಿಗಳ ಹಿನ್ನೆಲೆಯಲ್ಲಿ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಭವಿಷ್ಯವನ್ನು ವಿಶ್ಲೇಷಿಸುವ ಅಪರೂಪದ ಕೃತಿ. ಜಗತ್ತಿನ ಇತರ ಸಂಸ್ಕೃತಿಗಳು ಸಂಘರ್ಷದಲ್ಲಿ ನಾಶವಾದರೂ, ಶಾಂತಿ ಮತ್ತು ಸಹಬಾಳ್ವೆಯನ್ನು ಸಾರುವ ಹಿಂದೂ ಧರ್ಮವು ಹೇಗೆ ಉಳಿಯುತ್ತದೆ ಎಂಬುದನ್ನು ಈ ಪುಸ್ತಕವು ಐತಿಹಾಸಿಕ ಆಧಾರಗಳೊಂದಿಗೆ ಎತ್ತಿ ತೋರಿಸುತ್ತದೆ. ಮೂಲ ಲೇಖಕ ಜಿ.ಎಸ್. ಹಿರಣ್ಯಪ್ಪ ಅವರ ಕೃತಿಯನ್ನು ಮಂಜುನಾಥ್ ಭಟ್ ಅವರು ಅತ್ಯುತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ.
₹320.00 -
A Literary Luminary – Critical Appreciation of S. L. Bhyrappa’s Novels
A Literary Luminary explores the literary universe of Dr. S. L. Bhyrappa (1931–2025)—India’s foremost novelist whose 24 works have influenced generations. This English critique by Prof. L. V. Shanthakumari combines Indian philosophical concepts and Western literary theories to offer deep insights into Bhyrappa’s novels.
₹360.00₹400.00 -
ಸ್ವಾತಂತ್ರ್ಯ ಹೋರಾಟಗಾರರ ಸರಣಿ: ಭಾರತ-ಭಾರತಿ 50 ಪುಸ್ತಕಗಳ ಸೆಟ್
ಪುಸ್ತಕ: ಭಾರತ– ಭಾರತ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಲು ಹಾಗೂ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಿಗೆ (ಭಾಷಣ, ಪ್ರಬಂಧ, ಆಶುಭಾಷಣ) ಅವರನ್ನು ಸಜ್ಜುಗೊಳಿಸಲು ಭಾರತ-ಭಾರತಿ ಸರಣಿಯ ‘ಸ್ವಾತಂತ್ರ್ಯ ಮಹನೀಯರು’ 50 ಪುಸ್ತಕಗಳ ಸೆಟ್ ಇಲ್ಲಿದೆ. ಈಗಲೇ ಖರೀದಿಸಿ, ನಿಮ್ಮ ಮುಂದಿನ ಪೀಳಿಗೆಗೂ ನಮ್ಮ ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳನ್ನು ಪರಿಚಯಿಸಿ.
₹750.00
