Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ಸರ್ಪಯಾಗ – ಲೇಖಕರು: ಪ್ರಸಾದ್ ಆದ್ಯ | Sarpayaga Kannada Book

350.00

In stock

ಪುಸ್ತಕದ ವಿವರಗಳು:

  • ಪುಸ್ತಕದ ಹೆಸರು: ಸರ್ಪಯಾಗ

  • ಲೇಖಕರು: ಪ್ರಸಾದ್ ಆದ್ಯ

  • ಪ್ರಕಾಶನ: ಸುಜ್ಞಾನ ಪ್ರಕಾಶನ

  • ವಿಷಯ: ಪೌರಾಣಿಕ ಕಾದಂಬರಿ / ಮಹಾಭಾರತದ ಕಥೆ

ಮುಖ್ಯಾಂಶಗಳು:

  • ಮಹಾಭಾರತದ ಆದಿಪರ್ವದಲ್ಲಿ ಬರುವ ‘ಜನಮೇಜಯನ ಸರ್ಪಯಾಗ’ದ ರೋಚಕ ಹಿನ್ನೆಲೆ.

  • ರುರು ಮತ್ತು ಪ್ರಮದ್ವರೆಯರ ನಡುವಿನ ಗಾಢವಾದ ಪ್ರೇಮ ಮತ್ತು ತ್ಯಾಗದ ಕಥೆ.

  • ಪ್ರಾಣಿ ಹಿಂಸೆ, ಪರಿಸರ ನಾಶ ಹಾಗೂ ದ್ವೇಷದ ಬದುಕಿನ ವಿರುದ್ಧ ಆಧ್ಯಾತ್ಮಿಕ ಸಂದೇಶವನ್ನು ಸಾರುವ ಕೃತಿ.

  • ಕಣ್ಣಿಗೆ ಕಟ್ಟುವಂತಹ ಸುಂದರ ನಿರೂಪಣೆ ಮತ್ತು ಸರಳವಾದ ಭಾಷೆ.

350.00

Description

ಸರ್ಪಯಾಗ: ಮಹಾಭಾರತದ ಒಂದು ರೋಚಕ ಘಟ್ಟದ ಮರುಸೃಷ್ಟಿ

ಜನಮೇಜಯ ರಾಜ ನಡೆಸಿದ ಸರ್ಪಯಾಗದ ಪ್ರಸಂಗ ಮಹಾಭಾರತದ ಕಾವ್ಯದಲ್ಲಿ ಆದಿಯಲ್ಲೇ ನಿರೂಪಣೆಯಾಗಿರುವ ಒಂದು ಪ್ರಮುಖ ಘಟನೆ. ಈ ಸರ್ಪಯಾಗ ನಡೆಯಲು ಕಾರಣವೇನು? ಜನಮೇಜಯ ಮಹಾರಾಜ ಈ ಸರ್ಪಯಾಗವನ್ನು ಏಕೆ ಕೈಗೊಂಡ? ಆ ಯಾಗದಲ್ಲಿ ಸರ್ಪಗಳು ಒಂದೊಂದಾಗಿ ಅಗ್ನಿಕುಂಡದಲ್ಲಿ ಬೀಳುತ್ತಿರುವಾಗ ಆ ದಾರುಣ ಯಾಗವನ್ನು ಆಸ್ತಿಕ ಹೇಗೆ ತಡೆದ? ಯಾಗಕ್ಕೆ ಮೂಲ ಕಾರಣವಾದ ತಕ್ಷಕ ಕೊನೆ ಘಳಿಗೆಯಲ್ಲಿ ಹೇಗೆ ಬದುಕುಳಿದ? ಇವೆಲ್ಲ ಮಹಾಭಾರತದಲ್ಲಿ ಬರುವ ಅತ್ಯಂತ ಕುತೂಹಲಕಾರಿ ಘಟನೆಗಳು.

ರುರು-ಪ್ರಮದ್ವರೆಯರ ಪ್ರೇಮಕಥೆ: ಈ ಕಥೆಗೆ ಇಂಬು ಕೊಟ್ಟಿದ್ದು ರುರು-ಪ್ರಮದ್ವರೆಯರ ಪ್ರೇಮ ಸಂಬಂಧ. ಅವರಿಬ್ಬರಲ್ಲಿ ಅಂಕುರಿಸಿದ ಪ್ರೀತಿ ಗಾಢವಾದದ್ದು. ಆದರೆ ವಿವಾಹಕ್ಕೆ ಮುನ್ನವೇ ಪ್ರಮದ್ವರೆಗೆ ಸರ್ಪವೊಂದು ಕಡಿದು ಆಕೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾಳೆ. ತನ್ನ ಪ್ರೇಯಸಿಯ ಅಗಲುವಿಕೆಯಿಂದ ತೀವ್ರ ನೊಂದುಕೊಳ್ಳುವ ರುರುವಿನ ನೋವು, ಸರ್ಪದ ಮೇಲಿನ ದ್ವೇಷವಾಗಿ ತಿರುಗುತ್ತದೆ. ಕಂಡ ಕಂಡ ಸರ್ಪಗಳನ್ನು ಹಿಡಿದು ಸಾಯಿಸುವುದು ಅವನ ಗೀಳಾಗುತ್ತದೆ. ಒಮ್ಮೆ ವಿಷರಹಿತ ಜಾತಿಯ ಹಾವೊಂದನ್ನು ಸಾಯಿಸಲು ಹೋದಾಗ, ಅದು ರುರುವಿಗೆ ‘ಜನಮೇಜಯನ ಸರ್ಪಯಾಗ’ದ ಬಗ್ಗೆ ಹಿರಿಯರಿಂದ ಕೇಳಿ ತಿಳಿ ಎಂದು ಬುದ್ಧಿ ಹೇಳುತ್ತದೆ. ಇಲ್ಲಿಂದ ಸರ್ಪಯಾಗದ ಕಥೆ ವಿಸ್ತಾರಗೊಳ್ಳುತ್ತದೆ. ದೇವದೂತರ ಸಲಹೆಯಂತೆ ರುರು ತನ್ನ ಅರ್ಧ ಆಯಸ್ಸನ್ನು ಪ್ರಮದ್ವರೆಗೆ ಧಾರೆಯೆರೆದು ಆಕೆಯನ್ನು ಬದುಕಿಸಿಕೊಂಡು ವಿವಾಹವಾಗುತ್ತಾನೆ.

ಕೃತಿಯ ವೈಶಿಷ್ಟ್ಯಗಳು:

  • ದೃಶ್ಯರೂಪದ ನಿರೂಪಣೆ: ಪ್ರಸ್ತುತ ಈ ಗ್ರಂಥವನ್ನು ಓದುತ್ತಿದ್ದಂತೆ ಪ್ರತೀ ಸನ್ನಿವೇಶವೂ ಕಣ್ಣಿಗೆ ಕಟ್ಟುವ ಚಲನಚಿತ್ರದಂತೆ ಮನದಲ್ಲಿ ಮೂಡುತ್ತಾ ಹೋಗುತ್ತದೆ.

  • ಸೃಜನಶೀಲ ಬರವಣಿಗೆ: ಗ್ರಂಥದುದ್ದಕ್ಕೂ ಕಾಣಬರುವ ಭಾಷೆಯ ಹಿಡಿತ, ವಿಷಯಗಳ ಸ್ಪಷ್ಟ ಹಾಗೂ ಸುಂದರ ನಿರೂಪಣೆ, ಆಧ್ಯಾತ್ಮಿಕ ಚಿಂತನೆಗಳ ಸರಳ ಬಳಕೆ ಶ್ರೀ ಆದ್ಯ ಪ್ರಸಾದ್‌ರವರನ್ನು ಒಬ್ಬ ಸೃಜನಶೀಲ ಸಾಹಿತಿಗಳ ಸಾಲಿಗೆ ತಂದು ನಿಲ್ಲಿಸುತ್ತದೆ.

  • ಇಂದಿನ ಸಮಾಜಕ್ಕೆ ಸಂದೇಶ: ಪ್ರಾಣಿಗಳ ಹಿಂಸೆ, ಪರಿಸರದ ನಾಶ, ಕಲುಷಿತ ಮನಸ್ಸುಗಳು ಮತ್ತು ದ್ವೇಷದ ಬದುಕಿನಿಂದ ಮಾನವ ಕುಲದ ಮೇಲಾಗುವ ದುಷ್ಪರಿಣಾಮಗಳನ್ನು ಈ ಹೊತ್ತಿಗೆಯಲ್ಲಿ ಅತ್ಯಂತ ಸಮಂಜಸವಾಗಿ ಚಿತ್ರಿಸಲಾಗಿದೆ.

ಒಟ್ಟಾರೆ ಸೊಗಸಾಗಿ ಮೂಡಿಬಂದಿರುವ, ಸುಜ್ಞಾನ ಪ್ರಕಾಶನ ಪ್ರಕಟಿಸಿರುವ ಈ ಹೊತ್ತಿಗೆ ಓದುಗರಿಗೆ ಸಾಹಿತ್ಯದ ರಸದೂಟವನ್ನು ನೀಡುತ್ತದೆ.

Specification

Additional information

Weight 387 g
Dimensions 21.4 × 14.2 × 1.4 cm
author-name

language

Kannada

published-date

2026

Reviews (0)

Be the first to review “ಸರ್ಪಯಾಗ – ಲೇಖಕರು: ಪ್ರಸಾದ್ ಆದ್ಯ | Sarpayaga Kannada Book”

Reviews

There are no reviews yet.

Main Menu

ಸರ್ಪಯಾಗ - ಲೇಖಕರು: ಪ್ರಸಾದ್ ಆದ್ಯ | Sarpayaga Kannada Book

ಸರ್ಪಯಾಗ - ಲೇಖಕರು: ಪ್ರಸಾದ್ ಆದ್ಯ | Sarpayaga Kannada Book

350.00

Add to Cart