ಸಹ್ಯಾದ್ರಿಯ ಸೆರೆಯಲ್ಲಿ | Sahyadriya Sereyalli – Ganesh Bhat Koppalathota (Kannada Novel)
₹499.00
‘ಸಹ್ಯಾದ್ರಿಯ ಸೆರೆಯಲ್ಲಿ’ ಗಣೇಶ ಭಟ್ಟ ಕೊಪ್ಪಲತೋಟ ಅವರು ರಚಿಸಿರುವ ಅದ್ಭುತ ಮಲೆನಾಡಿನ ಹಿನ್ನೆಲೆಯ ಕನ್ನಡ ಕಾದಂಬರಿ. ಸ್ವಾತಂತ್ರ್ಯಪೂರ್ವದ ಮಲೆನಾಡಿನ ಸಣ್ಣ ಹಳ್ಳಿಗಳ ಜನರ ಜೀವನ, ಸಂಪ್ರದಾಯ, ಅಂತರಂಗದ ತುಮುಲಗಳು ಹಾಗೂ ಕ್ರಾಂತಿಕಾರಕ ಬದಲಾವಣೆಗಳನ್ನು ಈ ಕೃತಿಯು ಅತ್ಯಂತ ಸೊಗಸಾಗಿ ಚಿತ್ರಿಸುತ್ತದೆ.
ವರ್ಗ: ಕನ್ನಡ ಕಾದಂಬರಿ (Kannada Novel)
ಲೇಖಕರು: ಗಣೇಶ ಭಟ್ಟ ಕೊಪ್ಪಲತೋಟ
ಪ್ರಕಾಶಕರು: ಅಯೋಧ್ಯ ಪಬ್ಲಿಕೇಷನ್ಸ್ (Ayodhya Publications)
Description
ಸಹ್ಯಾದ್ರಿಯ ಸೆರೆಯಲ್ಲಿ – ಕಾದಂಬರಿಯ ಪರಿಚಯ
ಗಣೇಶ ಭಟ್ಟ ಕೊಪ್ಪಲತೋಟ ಅವರ ‘ಸಹ್ಯಾದ್ರಿಯ ಸೆರೆಯಲ್ಲಿ’ ಕಾದಂಬರಿಯು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಹಳ್ಳಿಗಳ ಜೀವನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಭಾವನಾತ್ಮಕ ಹಾಗೂ ಸಾಮಾಜಿಕ ಕೃತಿಯಾಗಿದೆ. ಪಶ್ಚಿಮಘಟ್ಟಗಳ ಸಾಲಿನ ಹಸಿರು ಕಾನನ, ಸಮುದ್ರತೀರದ ಅದ್ಭುತ ದೃಶ್ಯ ವೈಭವದ ಹಿನ್ನೆಲೆಯಲ್ಲಿ ಬೆಳೆಯುವ ಈ ಕಥೆಯು, ಮಲೆನಾಡಿನ ಸಣ್ಣ ಹಳ್ಳಿಯಿಂದ ಆರಂಭವಾಗಿ ಮುಂಬಾಯಿ-ಬೆಂಗಳೂರುಗಳ ವರೆಗೆ ಹರಿಯುತ್ತದೆ. ಆ ಕಾಲದ ಸಾಮಾಜಿಕ-ಸಾಂಸ್ಕೃತಿಕ ಪರಿಸರ, ಜನರ ನಂಬಿಕೆಗಳು, ಆತ್ಮೀ ಯರ ಅಗಲುವಿಕೆ, ರಂಗಭೂಮಿ/ನಾಟಕ ರಂಗದ ಅನುಭವಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಬಿಸಿಯನ್ನು ಈ ಕಾದಂಬರಿ ಅತ್ಯಂತ ರೋಚಕವಾಗಿ ಕಟ್ಟಿಕೊಡುತ್ತದೆ.
(ಬೆನ್ನುಡಿಯಿಂದ) “ಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ ಬೆಟ್ಟ, ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೆಯೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ!”
“ಸಹ್ಯಾದ್ರಿಯ ಸೆರೆಯಲ್ಲಿ” ಇದು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಸಣ್ಣ ಹಳ್ಳಿಗಳ ಕೆಲವು ವ್ಯಕ್ತಿಗಳ ಜೀವನ, ಅವರ ಅಂತರಂಗದ ತುಮುಲಗಳ ಜೊತೆಯಲ್ಲಿ ಸಾಗುವ ಕಥೆ. ಆ ಕಾಲದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳು, ಅದರಿಂದ ಅವರ ಜೀವನದಲ್ಲಿ ನಡೆದ ಘಟನೆಗಳ ಚಿತ್ರಣ. ಆತ್ಮೀ ಯರ ಅಗಲುವಿಕೆ, ಜೀವನಾನುಭವದಿಂದ ಬದಲಾಗುವ ಮನಸ್ಥಿತಿಗಳು, ಸ್ವಾತಂತ್ರ್ಯಸಂಗ್ರಾಮದ ಬಿಸಿ, ಹಳ್ಳಿಯ ಜನರ ನಂಬಿಕೆಗಳು, ಸಂಪ್ರದಾಯವನ್ನು ಮೀರುವ ಕ್ರಾಂತಿಕಾರಕ ಮನೋಭಾವ, ಪಟ್ಟಣದ ಜೀವನ, ನಾಟಕರಂಗದ ಅನುಭವಗಳು- ಹೀಗೆ ಹತ್ತಾರು ಸ್ತರಗಳಲ್ಲಿ, ಮಲೆನಾಡಿನ ಹಳ್ಳಿಯಿಂದ ಬೊಂಬಾಯಿ-ಬೆಂಗಳೂರುಗಳ ತನಕ ಹರಿಯುತ್ತಾ ಆ ಕಾಲವನ್ನು ಅನ್ವೇಷಿಸುತ್ತದೆ ಈ ಕಾದಂಬರಿ.
Specification
Additional information
| Book Name | ಸಹ್ಯಾದ್ರಿಯ ಸೆರೆಯಲ್ಲಿ (Sahyadriya Sereyalli) |
|---|---|
| ಪ್ರಕಾಶಕರು | ಅಯೋಧ್ಯಾ ಪಬ್ಲಿಕೇಷನ್ಸ್ |
| language | Kannada |













Reviews
There are no reviews yet.