Rashtrotthana Sahitya Books Online: Kannada & English – Buy Books Online
-
-
-
ಪರಿಸರ ಪರ | Parisara Para Kannada Book By Narayana Shevire
ಪುಸ್ತಕದ ಹೆಸರು: ಪರಿಸರ ಪರ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಪರಿಸರ, ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ವೃಕ್ಷಾರೋಪಣ, ಪರಿಸರ ದಿನ ಆಚರಣೆ – ಹೀಗೆ ದಿನವೂ ಪರಿಸರ-ಸಂಬಂಧಿತ ಒಂದಲ್ಲ ಒಂದು ವಿಷಯ-ಸುದ್ದಿ ಕಿವಿಗೆ ಬೀಳುತ್ತಿರುವ ವರ್ತಮಾನದಲ್ಲಿ ನಮಗೆ ಅನುಸರಣೀಯವಾದ ದೃಷ್ಟಿ-ಧೋರಣೆ ಯಾವುದು?- ಎಂಬುದನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಅಂಥದ್ದೊಂದು ಚಿಂತನೆಗೆ ತೊಡಗಲು ಒದಗಿಬರಬಹುದಾದ, ಪರಿಸರ ಸಂಬಂಧಿತ, ಲೇಖನಗಳ ಸಂಕಲನ ‘ಪರಿಸರ ಪರ’.₹108.00₹120.00ಪರಿಸರ ಪರ | Parisara Para Kannada Book By Narayana Shevire
₹108.00₹120.00 -
ಪಾಠಶಾಲೆ | Patashale Kannada Book By Narayana Shevire
ಪುಸ್ತಕದ ಹೆಸರು: ಪಾಠಶಾಲೆ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.₹108.00₹120.00ಪಾಠಶಾಲೆ | Patashale Kannada Book By Narayana Shevire
₹108.00₹120.00 -
ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್.ಆರ್. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.
₹108.00₹120.00ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
₹108.00₹120.00 -
-
-
-
-
-
-
Importance of Rewriting Our Distorted Indian History – By Manjunatha Ajjampura
A powerful and concise book that exposes how colonial rulers and later Marxist scholars distorted India’s history. Written by Manjunatha Ajjampura, this work urges readers to rediscover true Indian history based on evidence, inscriptions, scriptures, and cultural heritage.
₹90.00₹100.00 -
ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ
ಲೇಖಕರು: ಕ. ವೆಂ. ನಾಗರಾಜ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.
₹90.00₹100.00 -
-
ಭಾರತೀಯ ಸ್ವಾತಂತ್ರ್ಯ ಸಂಗ್ರಾಮ
ನಾರಾಯಣ ಶೇವಿರೆ – ಎಂ ಎನ್ ರವೀಂದ್ರ
₹90.00₹100.00ಭಾರತೀಯ ಸ್ವಾತಂತ್ರ್ಯ ಸಂಗ್ರಾಮ
₹90.00₹100.00















