-
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹250.00 -
ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ ಇತಿಹಾಸ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಳೆದ ಒಂದು ಶತಮಾನದಿಂದ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ವಿಕೃತಗೊಂಡಿರುವ ಭಾರತದ ಇತಿಹಾಸವನ್ನು ನೈಜ ಸಾಕ್ಷ್ಯಾಧಾರಗಳು, ಶಿಲಾ ಶಾಸನಗಳು ಹಾಗೂ ಆಸ್ಥಾನ ಇತಿಹಾಸಕಾರರ ದಾಖಲೆಗಳ ಮೂಲಕ ಮರುಕಟ್ಟುವ ಮಹತ್ವದ ಕೃತಿ ‘ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ’. ಮಂಜುನಾಥ ಅಜ್ಜಂಪುರ ಅವರು ರಚಿಸಿರುವ ಈ ಪುಸ್ತಕವು, ನಮ್ಮದು ಸೋತ ಸಮಾಜವಲ್ಲ, ಬದಲಾಗಿ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೇಷ್ಠ ಸಂಸ್ಕೃತಿ ಎಂಬುದನ್ನು ಸತ್ಯದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
₹90.00₹100.00ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
₹90.00₹100.00 -
ಭುಗಿಲು | 1975–77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ಸತ್ಯಕಥೆ
ಪುಸ್ತಕದ ಹೆಸರು: ಭುಗಿಲು
ಸಂಪಾದಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳು ಮತ್ತು ಸರ್ವಾಧಿಕಾರದ ವಿರುದ್ಧ ಭಾರತೀಯರು ನಡೆಸಿದ ಜನಾಂದೋಲನದ ರೋಚಕ ಸತ್ಯಕಥೆ ‘ಭುಗಿಲು’. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕರ್ನಾಟಕದಲ್ಲಿ ನಡೆದ ಭೂಗತ ಹೋರಾಟದ ಸಮಗ್ರ ದಾಖಲೆಯನ್ನು ಈಗಲೇ Sahitya Books ನಲ್ಲಿ ಖರೀದಿಸಿ.
₹675.00₹750.00ಭುಗಿಲು | 1975–77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ಸತ್ಯಕಥೆ
₹675.00₹750.00 -
ನಮ್ಮೆಲ್ಲರ ತಾಯಿ ಭಾರತ | Nammeallara Thayi Bharatha | ಎಲ್.ವಿ. ಶಾಂತಕುಮಾರಿ
ಪುಸ್ತಕದ ಹೆಸರು: ನಮ್ಮೆಲ್ಲರ ತಾಯಿ ಭಾರತ
ಲೇಖಕರು: ಇಂಗ್ಲಿಷ್ ಮೂಲ: ಚಮನ್ಲಾಲ್
ಕನ್ನಡ ಅನುವಾದ: ಎಲ್.ವಿ. ಶಾಂತಕುಮಾರಿಜಗತ್ಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯೂರಾಂಟ್ ಅವರ ಪ್ರೇರಣೆ ಹಾಗೂ ಭಿಕ್ಷು ಚಮನ್ಲಾಲ್ ಅವರ ಆಳವಾದ ಸಂಶೋಧನೆಯಿಂದ ಮೂಡಿಬಂದ ಅದ್ಭುತ ಕೃತಿ ‘ನಮ್ಮೆಲ್ಲರ ತಾಯಿ ಭಾರತ’. ಭಾರತದ ಭವ್ಯ ಇತಿಹಾಸ, ವೈವಿಧ್ಯತೆಯಲ್ಲಿನ ಏಕತೆ, ಪ್ರಾಚೀನ ನೌಕಾನಿರ್ಮಾಣ ಕಲೆ ಮತ್ತು ಜಗತ್ತಿಗೆ ಈ ದೇಶ ನೀಡಿದ ಸಾಂಸ್ಕೃತಿಕ ಕೊಡುಗೆಗಳನ್ನು ವಿದೇಶಿ ವಿದ್ವಾಂಸರ ಅಧಿಕೃತ ದಾಖಲೆಗಳೊಂದಿಗೆ ಪರಿಚಯಿಸುವ ಅಪರೂಪದ ಪುಸ್ತಕ. ನಮ್ಮ ಇತಿಹಾಸದ ಪಠ್ಯಪುಸ್ತಕಗಳು ಹೇಳದ ಭಾರತದ ನೈಜ ಔನ್ನತ್ಯವನ್ನು ಅರಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ.
₹220.00 -
ಗೀತಾಂತರಂಗ | Geetantaranga (ಮಹಾಭಾಗವತ ಡಾ|| ಕುರ್ತಕೋಟಿ ಶಂಕರಾಚಾರ್ಯರು)
ಭಗವದ್ಗೀತೆ ಎಂದರೆ ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ನಮ್ಮ ಜೀವನದ ದಾರಿ ದೀಪ. ಗೀತೆಯ ಶ್ಲೋಕಗಳ ಹಿಂದೆ ಇರುವ ನಿಜವಾದ ಅಂತರಾರ್ಥವನ್ನು ಅತ್ಯಂತ ಸುಲಭವಾಗಿ ಮತ್ತು ಕಲಾತ್ಮಕವಾಗಿ ಬಿಡಿಸಿಡುವ ಅದ್ಭುತ ಕೃತಿಯೇ ‘ಗೀತಾಂತರಂಗ’.
₹180.00₹200.00 -
ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)
ಪುಸ್ತಕದ ಹೆಸರು: ಪುನರುತ್ಥಾನ
ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.
₹270.00₹300.00 -
ಭಾರತ ದರ್ಶನ
ಪುಸ್ತಕದ ಹೆಸರು: ಭಾರತ ದರ್ಶನ
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಡಲತಡಿಯಿಂದ ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ’ಭಾರತ ದರ್ಶನ’.₹225.00₹250.00ಭಾರತ ದರ್ಶನ
₹225.00₹250.00 -
ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು | Avishranta Dhyeyajeevi
ರಾಷ್ಟ್ರೋತ್ಥಾನ ಪರಿಷತ್ತಿನ ರೂವಾರಿ ಹಾಗೂ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ. ಚ. ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’. ಲೇಖಕರು: ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೇಳೂರು ಸುದರ್ಶನ. ಪುಸ್ತಕವನ್ನು ಆನ್ಲೈನ್ನಲ್ಲಿ ಖರೀದಿಸಿ.
₹180.00₹200.00 -
ನನ್ನ ಕೃಷ್ಣ: ಲೋಕೋತ್ತರ ನಾಯಕನ ಜೀವನಕಥನ – ಎಂ. ಶ್ರೀನಿವಾಸನ್ | Nanna Krishna Kannada Book
ಎಲ್ಲರಿಗೂ ಸಲ್ಲುವ ಕೃಷ್ಣನ ಅದ್ಭುತ ಕಥನ (The Complete Story of Lord Krishna) “ನನ್ನ ಕೃಷ್ಣ” (Nanna Krishna) is a masterpiece by veteran journalist and author M. Srinivasan. ಹುಟ್ಟಿನಿಂದ ಸಾವಿನವರೆಗೂ ಅಚ್ಚರಿಗಳ ಮೊತ್ತವಾದ ಕೃಷ್ಣನ ಬದುಕನ್ನು ಈ ಕೃತಿ ಅತ್ಯಂತ ಸುಂದರವಾಗಿ ಅನಾವರಣಗೊಳಿಸುತ್ತದೆ. ಇದು ಕೇವಲ ಸಾಮಾನ್ಯ ಪೌರಾಣಿಕ ಕಥೆಯಲ್ಲ; ಬದಲಾಗಿ, ಕೃಷ್ಣನನ್ನು ಅಪ್ರತಿಮ ಸಾಧಕನೆಂದು (an extraordinary achiever) ನಿರೂಪಿಸುವ ಸಾಹಸವನ್ನು ಲೇಖಕರು ಮಾಡಿದ್ದಾರೆ.
₹292.50₹325.00 -
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.
₹144.00₹160.00ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹144.00₹160.00 -
ಇತಿಹಾಸದ ಸೆರಗು: ಪರಾಮರ್ಶ ಪ್ರಬಂಧಗಳು | Ithihasada Seragu by S.R. Ramaswamy
ಖ್ಯಾತ ಲೇಖಕರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಅವರು ರಚಿಸಿರುವ “ಇತಿಹಾಸದ ಸೆರಗು” ಕೇವಲ ಗತಕಾಲದ ಶುಷ್ಕ ವರದಿಯಲ್ಲ; ಇದು ಭವಿಷ್ಯಕ್ಕೆ ದಾರಿದೀಪವಾಗಬಲ್ಲ ವಿಶ್ಲೇಷಣಾತ್ಮಕ ಪ್ರಬಂಧಗಳ ಅದ್ಭುತ ಸಂಕಲನ. ಚಾಣಕ್ಯನ ಅರ್ಥಶಾಸ್ತ್ರದಿಂದ ಹಿಡಿದು, ಕೃಷ್ಣದೇವರಾಯನ ಸಾರ್ವಭೌಮತೆ, ಬ್ರಿಟಿಷರ ದಮನನೀತಿ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ರಾಜ್ಯಾಂಗ ವಿನ್ಯಾಸದವರೆಗಿನ ಅನೇಕ ಐತಿಹಾಸಿಕ ಘಟ್ಟಗಳನ್ನು ಹೊಸ ದೃಷ್ಟಿಕೋನದಿಂದ ಪರಾಮರ್ಶಿಸುವ ಕೃತಿ ಇದು.
₹198.00₹220.00 -
ಮಾಡಿ ಮಡಿದವರು | ‘ಅಗ್ನಿಗರ್ಭ ಚಟ್ಟೋಗ್ರಾಂ‘ ವೀರರ ಸಾಹಸಗಾಥೆ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಮಾಡಿ ಮಡಿದವರು – ‘ಅಗ್ನಿಗರ್ಭ ಚಟ್ಟೋಗ್ರಾಂ’ ವೀರರ ಸಾಹಸಗಾಥೆ
ಲೇಖಕರು: ಬಿ.ಪಿ. ಪ್ರೇಮಕುಮಾರ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧದ ಸಶಸ್ತ್ರ ಹೋರಾಟದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾದ ಚಿತ್ತಗಾಂವ್ ಕ್ರಾಂತಿಯ ಅಪೂರ್ವ ಕಥನವೇ ‘ಮಾಡಿ ಮಡಿದವರು’. ಒಬ್ಬ ಸಾಮಾನ್ಯ ಶಾಲಾ ಶಿಕ್ಷಕ ಸೂರ್ಯಸೇನ್ (ಮಾಸ್ಟರ್ ದಾ) ಅವರ ನೇತೃತ್ವದಲ್ಲಿ ಹದಿಹರೆಯದ ತರುಣ-ತರುಣಿಯರು ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿದ ರೋಮಾಂಚಕ ಇತಿಹಾಸವನ್ನು ಈ ಕೃತಿ ಅನಾವರಣಗೊಳಿಸುತ್ತದೆ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಈ ಪುಸ್ತಕವು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಪ್ರೇರಣಾದಾಯೀ ಕೃತಿಯಾಗಿದೆ.
₹293.00₹325.00 -
ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ
ಲೇಖಕರು: ಕ. ವೆಂ. ನಾಗರಾಜ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.
₹100.00 -
ಆನಂದಮಠ – ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಅನುವಾದ: ಎಸ್. ಆರ್. ರಾಮಸ್ವಾಮಿ) | Anandamatha Kannada Book by Bankim Chandra Chattopadhyay, Translated by S.R. Ramaswamy
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ, ನವಭಾರತದ ನಿರ್ಮಾಣಕ್ಕೆ ಸ್ಫೂರ್ತಿಯಾದ ಚಿರಂತನ ಕೃತಿ. 1770ರ ಬಂಗಾಳದ ಭೀಕರ ಕ್ಷಾಮ ಹಾಗೂ ಬ್ರಿಟಿಷರ ವಿರುದ್ಧ ನಡೆದ ‘ಸಂನ್ಯಾಸಿಗಳ ದಂಗೆ’ಯ ಐತಿಹಾಸಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಾದಂಬರಿಯು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಪುಸ್ತಕವಾಗಿದೆ. ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಉದಯಿಸಿದ್ದು ಇದೇ ಕೃತಿಯಿಂದ.
-
ಮೂಲ: ಬಂಕಿಮಚಂದ್ರ ಚಟ್ಟೋಪಾಧ್ಯಾಯ
-
ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ
-
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ
₹198.00₹220.00 -
