ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ – ವ್ಯಕ್ತಿತ್ವ ವಿಕಾಸ ಪ್ರಬಂಧಗಳು | Yantrikatheyinda Sarthakatheyadege Kannada Book – Dr. K. Jagadish Pai
₹202.50₹225.00 (-10%)
ಪ್ರಸಿದ್ಧ ಲೇಖಕ ಡಾ. ಕೆ. ಜಗದೀಶ್ ಪೈ ಅವರು ಬರೆದು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ’ ಒಂದು ಅತ್ಯುತ್ತಮ ವ್ಯಕ್ತಿತ್ವ ವಿಕಾಸ ಪ್ರಬಂಧಗಳ ಸಂಕಲನವಾಗಿದೆ. ಇಂದಿನ ಕೇವಲ ಬಾಹ್ಯರೂಪ, ಸಂಪತ್ತು, ಗಳಿಕೆಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಇಂದಿನ ತಲೆಮಾರಿಗೆ, ಅಂತರಂಗದ ವಿಕಾಸ ಹಾಗೂ ಅರಿಷಡ್ವರ್ಗಗಳಿಂದ ಮುಕ್ತವಾಗಿ ಸಾರ್ಥಕ ಜೀವನ ನಡೆಸಲು ಈ ಕೃತಿ ಸರಳ ಸುಂದರ ಉದಾಹರಣೆಗಳೊಂದಿಗೆ ದಾರಿ ದೀಪವಾಗಿದೆ.
Description
ಇಂದು ಸ್ಪರ್ಧೆಯೇ ಬದುಕಿನ ಸಾಮಾನ್ಯ ಕೇಂದ್ರವಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿರುವ ಸ್ಪರ್ಧಾತ್ಮಕತೆ ನಮ್ಮನ್ನು ದಿನನಿತ್ಯವೂ ಪೈಪೋಟಿಯ ಕಣದಲ್ಲಿ ನಿಲ್ಲಿಸಿದೆ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಪಡಿಸುವುದು ಎಲ್ಲೆಡೆ ಅನಿವಾರ್ಯವೆನಿಸಿದೆ. ‘ಎಲ್ಲಕಡೆ ಗೆಲ್ಲಬೇಕು, ಉನ್ನತ ಹುದ್ದೆಗೆ ಹೋಗಬೇಕು, ಹೆಚ್ಚು ಹೆಚ್ಚು ಸಂಪಾದಿಸಬೇಕು, ಐಷಾರಾಮಿ ಜೀವನ ನಡೆಸಬೇಕು’ ಎಂಬ ಮಾನಸಿಕತೆ ಬಾಲ್ಯದಿಂದಲೇ ಬಲಗೊಳ್ಳುತ್ತಿದೆ.
ಇದಕ್ಕೆ ಪೂರಕವಾಗಿ, ಇಂದು ‘ವ್ಯಕ್ತಿತ್ವ ವಿಕಾಸ’ವೆಂದರೆ ‘ವ್ಯಕ್ತಿಯೊಬ್ಬನ ಬಾಹ್ಯರೂಪ, ಲಕ್ಷಣ, ಸ್ಥಿತಿ, ಸಂಪತ್ತು, ಗಳಿಕೆ ಮುಂತಾದವುಗಳನ್ನು ಹೆಚ್ಚಿಸುವುದು’ ಎಂಬ ಸಂಕುಚಿತ ಕಲ್ಪನೆ ಮೂಡಿದೆ. ಇಂತಹ ಯಾಂತ್ರಿಕ ಸಂದರ್ಭದಲ್ಲಿ, ವ್ಯಕ್ತಿತ್ವ ವಿಕಾಸವೆಂದರೆ ನಿಜವಾಗಿ ‘ವ್ಯಕ್ತಿಯ ಅಂತರಂಗದ ವಿಕಾಸ; ಅರಿಷಡ್ವರ್ಗಗಳಿಂದ ಆತ ಮುಕ್ತನಾಗುವ, ಮಾನಸಿಕವಾಗಿ ಪಕ್ವವಾಗುವ ಪ್ರಕ್ರಿಯೆ’ ಎಂಬ ಭಾರತೀಯ ದೃಷ್ಟಿಕೋನವನ್ನು ಸರಳ ಸುಂದರ ಉದಾಹರಣೆಗಳೊಂದಿಗೆ ಈ ಕೃತಿಯಲ್ಲಿ ವಿವರಿಸಲಾಗಿದೆ.ಈ ಕೃತಿಯನ್ನು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಅಧ್ಯಾಯವೂ ಓದುಗನಿಗೆ ಹೊಸ ಭರವಸೆ ಮೂಡಿಸುತ್ತದೆ:
ಭಾಗ – I : ಅನುವರ್ತನೆ
ಮತ್ಸರ ಬಿಟ್ಟು ಮಾನವರಾಗಿ
ಅಹಂಕಾರ ತೊರೆದಾಗಲೇ ಮುಕ್ತಿ
ಆಲಸ್ಯವೇ ಮಹಾಶತ್ರು
ದ್ವೇಷ ದಹಿಸಿ ಪ್ರೇಮ ಸ್ವರೂಪಿಗಳಾಗೋಣ
ಮಾತನ್ನು ಮಿತಗೊಳಿಸಿ, ಮೌನಕ್ಕೆ ಶರಣಾಗಿ
ನಿಂದೆಯನ್ನು ಜೀರ್ಣಿಸಿಕೊಳ್ಳಿ
ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಿ
ಭಾಗ – II : ಅನುಸಂಧಾನ
ಸತ್-ಚಿಂತಕರಾಗೋಣ
ಹೃದಯವಂತಿಕೆಯನ್ನು ಬೆಳೆಸಿಕೊಳ್ಳೋಣ
ಸಜ್ಜನರ ಸಂಗ ಹೆಚ್ಚೇನು ಸವಿದಂತೆ
ಶಿಸ್ತಿನ ಜೀವನ ನಮ್ಮದಾಗಲಿ
ಭಾಗ – III : ಅನುಷ್ಠಾನ
ಪರೋಪಕಾರಾರ್ಥಂ ಇದಂ ಶರೀರಮ್
ಧರ್ಮೋ ರಕ್ಷತಿ ರಕ್ಷಿತಃ
ಸಂಘೇ ಶಕ್ತಿಃ ಕಲಿಯುಗೇ
ರಾಷ್ಟ್ರದೇವೋ ಭವ
Specification
Additional information
| author-name | |
|---|---|
| language | Kannada |
| published-date | October 2022 |
| no-of-pages | 225 |












