ಪುಸ್ತಕದ ಹೆಸರು: ಮಂತ್ರಸಂತಾನ ಮತ್ತು ಮೂರು ನಾಟಕಗಳು
ಲೇಖಕರು: ದಿವಾಕರ ಹೆಗಡೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಪ್ರಾಚೀನ ಸಾಹಿತ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ, ವರ್ತಮಾನದ ಆಗುಹೋಗುಗಳಿಗೆ ಬೆಳಕು ಚೆಲ್ಲುವ ನಾಲ್ಕು ವಿಶಿಷ್ಟ ನಾಟಕಗಳ ಸಂಕಲನ ‘ಮಂತ್ರಸಂತಾನ ಮತ್ತು ಮೂರು ನಾಟಕಗಳು’. ಶಿವಪುರಾಣದ ‘ಕಾರ್ತಿಕೇಯ’ ಹಾಗೂ ಮಹಾಭಾರತದ ಮೂರು ಪ್ರಮುಖ ಸಂದರ್ಭಗಳನ್ನು ಲೇಖಕ ದಿವಾಕರ ಹೆಗಡೆಯವರು ಇಲ್ಲಿ ಅದ್ಭುತವಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.