ಮಹಿಷಾಸುರಮರ್ದಿನಿ

150.00

In stock

ಕೃಷ್ಣಮೂರ್ತಿ ಆರ್

150.00

Description

ಮಹಿಷಾಸುರಮರ್ದಿನಿ ಶಿಲ್ಪದ ಬೆಳವಣಿಗೆ ಮತ್ತು ಮಹಿಷಮಂಡಲಸಂಶೋಧನಾತ್ಮಕ ಕೃತಿ

ಮಹಿಷಾಸುರಮರ್ದಿನಿ ಮಹಿಮಂಡಲ ಕುರಿತ ಸುಶೋಧನೆಯನ್ನು ಲೇಖಕರು ಪ್ರಾರಂಬಿಸಿದ್ದು ೨೦೧೫ರಲ್ಲಿ. ನಂತರ ಅದು ಅನೇಕ ಹಂತಗಳನ್ನು ಹಾದು ಈಗ ಕೃತಿರೂಪದಲ್ಲಿ ನಿಮ್ಮೆದುರು ಬರುತ್ತಿದೆ.

ಮಹಿಷಾಸುರಮರ್ದಿನಿಯ ಆರಾಧನೆಯ ಮೂಲ, ಬೆಳವಣಿಗೆ, ಮಹಿಷಮಂಡಲದ ಸ್ಥಾನ ನಿಷ್ಕರ್ಷೆ – ಇತ್ಯಾದಿ ವಿಷಯಗಳನ್ನು ಕೃತಿಯು ವಿಸ್ತೃತವಾಗಿ ಚರ್ಚಿಸುತ್ತದೆ. ೨೫೦೦ ವರ್ಷಗಳಿಂದ ಭಾರತದಲ್ಲಿ ಇರುವ ಶಕ್ತಿ ಆರಾಧನೆ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದಕ್ಕೆ ಸಾಮ್ಯತೆಯನ್ನು ತೋರಿಸುವ ಇನ್ನಿತರ ಶಕ್ತಿ ಆರಾಧನಾ ಪದ್ಧತಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ.

ಮಹಿಷಮಂಡಲ ಮತ್ತು ಮೈಸೂರು ಭಿನ್ನ ಸ್ಥಳಗಳೇ? ಮಹಿಷಾಸುರನೆಂಬುದು ವ್ಯಕ್ತಿಯಸಂಕೇತವೇ? ಚಾಮುಂಡೇಶ್ವರಿಯನ್ನೇ ಮಹಿಷಾಸುರಮರ್ದಿನಿ ಎನ್ನುತ್ತೇವೆಯೇ? ಕಾವೇರಿ ನದಿ ಕರ್ನಾಟಕವಲ್ಲದೆ ಬೇರಡೆ ಇದೆಯೇ? ಇತ್ಯಾದಿ ಹತ್ತುಹಲವು ಸಂಯ, ಪ್ರಶ್ನೆ, ಜಿಜ್ಞಾಸೆಗಳಿಗೆ ಕೃತಿಯು ಅತ್ಯಂತ ತಲಸ್ಪರ್ಶಿ ಸಂಶೋಧನಾಧಾರಿತ ಉತ್ತರಗಳನ್ನು ಕೊಡುವ ಪ್ರಯತ್ನ ಮಾಡುತ್ತದೆ. ವಿದ್ವತ್ ವಲಯ ಮತ್ತು ಜನಸಾಮಾನ್ಯರೆಂಬ ಎರಡು ವರ್ಗಗಳನ್ನೂ ಗಮನದಲ್ಲಿರಿಸಿಕೊಂಡು, ಐತಿಹಾಸಿಕ ದೃಷ್ಟಿಯ ಈ ಸಂಶೋಧನ ಕೃತಿಯನ್ನು ರಚಿಸಲಾಗಿದೆ.

Main Menu

ಮಹಿಷಾಸುರಮರ್ದಿನಿ

ಮಹಿಷಾಸುರಮರ್ದಿನಿ

150.00

Add to Cart