Description
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1890ರಿಂದ 1915ರವರೆಗಿನ ಮೂರೂವರೆ ದಶಕಗಳು ಒಂದು ಮಹತ್ತ್ವದ ಅಧ್ಯಾಯ. ಆ ಅವಧಿಯಲ್ಲಿ ಭಾರತದಲ್ಲಿ ಕಂಗೊಳಿಸಿದ, ರೂಪುಗೊಂಡ ಕ್ರಾಂತಿಕಾರಿ ಸರಣಿ ಜಗತ್ತಿನ ಇತಿಹಾಸದಲ್ಲೇ ಅನುಪಮ. ನಿಸ್ತೇಜಗೊಂಡಿದ್ದ ಜನಮಾನಸದಲ್ಲಿ ಹೋರಾಟದ ಕಿಚ್ಚು ಪ್ರಜ್ವಲಗೊಂಡದ್ದು ಆ ಕಾಲಖಂಡದಲ್ಲಿ. ಆ ವಿಪ್ಲವಯುಗದ ಕ್ರಾಂತಿಕಾರಿಗಳ ಪ್ರಾತಿನಿಧಿಕ ರೂಪ – ಈ ಗ್ರಂಥದ ಕಥಾನಾಯಕ ಬಾಘಾ ಜತೀನ್ ಅಥವಾ ಜತೀಂದ್ರನಾಥ ಮುಖೋಪಾಧ್ಯಾಯ. ಬಂಕಿಮಚಂದ್ರ-ವಿವೇಕಾನಂದರ ಸ್ಫೂರ್ತಿ, ಲೋಕಮಾನ್ಯ ತಿಲಕ್-ಲಜಪತರಾಯ್-ಬಿಪಿನ್ಚಂದ್ರ ಪಾಲ್ರಿಂದ ಪ್ರೇರಣೆ, ನಿವೇದಿತಾ-ಅರವಿಂದರಿಂದ ಮಾರ್ಗದರ್ಶನ – ಇವು ಮುಪ್ಪುರಿಗೊಂಡು ಸಾಕಾರಗೊಂಡ ಕ್ರಾಂತಿರತ್ನ, ಬಾಘಾ ಜತೀನ್. ಜತೀನ್ ಮುಖರ್ಜಿಯ ಸಾಹಸಮಯ ಜೀವನ, ಬಲಿದಾನಗಳನ್ನು ಕೇಂದ್ರವಾಗಿರಿಸಿಕೊಂಡ ಆ ರಕ್ತತರ್ಪಣ ಪರ್ವದ ರೋಮಾಂಚಕಾರಿ ಕಥನವೇ ‘ರುಧಿರಾಭಿಷೇಕ’. ಬಹುಮಟ್ಟಿಗೆ ಅಪರಿಚಿತರಾಗಿಯೆ ಉಳಿದಿರುವ ಬ್ರಹ್ಮಬಾಂಧವ ಉಪಾಧ್ಯಾಯ, ಮಾಸ್ಟರ್ ಅಮೀರ್ಚಂದ್, ಕರ್ತಾರಸಿಂಗ್ ಸರಾಬಾ, ಅವಧ ಬಿಹಾರಿ, ಸ್ವಾಮಿ ಪ್ರಜ್ಞಾನಂದ ಸರಸ್ವತಿ ಮೊದಲಾದ ಹತ್ತಾರು ವ್ಯಕ್ತಿಗಳನ್ನು ಇಲ್ಲಿ ಮೊಟ್ಟಮೊದಲ ಬಾರಿಗೆ ವಿಸ್ತೃತವಾಗಿ ಪರಿಚಯಿಸಲಾಗಿದೆ.
Specification
Additional information
| book-no | 95 |
|---|---|
| isbn | ISBN : 81-7531-029-1 |
| author-name | |
| published-date | 2004 |
| language | Kannada |





