Roll over image to zoom in
Description
ನಮ್ಮ ಮಾತೃಭೂಮಿಯ ದರ್ಶನ, ಅಧ್ಯಾತ್ಮ, ನೀತಿ, ಮಾಧುರ್ಯ, ಕೋಮಲತೆ, ಪ್ರೀತಿ ಇವುಗಳ ತವರೂರು. ಇವು ಈಗಲೂ ಇವೆ. ನಾನು ಪಡೆದಿರುವ ಲೋಕಾನುಭವವು ಇದನ್ನು ಮತ್ತೂ ದೃಢಪಡಿಸಿರುವುದು. ಈಗಲೂ ಭರತಖಂಡವು ಈ ಗುಣಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ ಎಂದು ಮುಕ್ತಕಂಠದಿಂದ ಸಾರುತ್ತೇನೆ. ಜನಾಂಗದ ಜೀವಾಳ, ಜನಾಂಗದ ಕರ್ತವ್ಯವಿರುವುದು ಧರ್ಮದಲ್ಲಿ ಎನ್ನುವುದನ್ನು ಇದು ತೋರುವುದು. ಅದು ಇನ್ನೂ ನಾಶವಾಗಿಲ್ಲ. ಆದಕಾರಣ ಜನಾಂಗ ಜೀವಿಸಿರುವುದು.
ಹೇ ಭರತಖಂಡವೇ, ಜಾಗೃತವಾಗು! ನಿನ್ನ ಅಧ್ಯಾತ್ಮದಿಂದ ಪ್ರಪಂಚವನ್ನು ಗೆಲ್ಲು.
ಸ್ವಾಮಿ ವಿವೇಕಾನಂದ