Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ಮಂತ್ರಸಂತಾನ ಮತ್ತು ಮೂರು ನಾಟಕಗಳು | Mantrasanthana Mattu Mooru Natakagalu | ದಿವಾಕರ ಹೆಗಡೆ

198.00220.00 (-10%)

In stock

ಪುಸ್ತಕದ ಹೆಸರು: ಮಂತ್ರಸಂತಾನ ಮತ್ತು ಮೂರು ನಾಟಕಗಳು
ಲೇಖಕರು: ದಿವಾಕರ ಹೆಗಡೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ

ಪ್ರಾಚೀನ ಸಾಹಿತ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ, ವರ್ತಮಾನದ ಆಗುಹೋಗುಗಳಿಗೆ ಬೆಳಕು ಚೆಲ್ಲುವ ನಾಲ್ಕು ವಿಶಿಷ್ಟ ನಾಟಕಗಳ ಸಂಕಲನ ‘ಮಂತ್ರಸಂತಾನ ಮತ್ತು ಮೂರು ನಾಟಕಗಳು’. ಶಿವಪುರಾಣದ ‘ಕಾರ್ತಿಕೇಯ’ ಹಾಗೂ ಮಹಾಭಾರತದ ಮೂರು ಪ್ರಮುಖ ಸಂದರ್ಭಗಳನ್ನು ಲೇಖಕ ದಿವಾಕರ ಹೆಗಡೆಯವರು ಇಲ್ಲಿ ಅದ್ಭುತವಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

198.00220.00 (-10%)

Description

ರಾಮಾಯಣ-ಮಹಾಭಾರತಾದಿ ಮಹಾಕಾವ್ಯಗಳನ್ನೂ ಪುರಾಣಸಾಹಿತ್ಯವನ್ನೂ ಹೇಗೆ ನೋಡಬೇಕು, ಅರ್ಥೈಸಬೇಕು, ಅವುಗಳ ಆಶಯವನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು ಎಂಬುದು ‘ಆಧುನಿಕ’ರಾದ ನಮ್ಮೆದುರಿನ ಪ್ರಶ್ನೆ. ವರ್ತಮಾನದ ನೆಲೆಯಲ್ಲಿ ನಮ್ಮ ಇಂದಿನ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ವ್ಯಾವಹಾರಿಕ ಆಗುಹೋಗುಗಳನ್ನು ಕೇಂದ್ರಿತವಾಗಿರಿಸಿಕೊಂಡು ಸಾವಿರಾರು ವರ್ಷಗಳ ಹಿಂದಿನ ಸಾಹಿತ್ಯಕೃತಿಗಳನ್ನು ಅರ್ಥೈಸಿ, ಮರು-ನಿರೂಪಿಸಬೇಕು ಎನ್ನುವುದು ಒಂದು ಅಭಿಪ್ರಾಯವಾದರೆ; ಅವುಗಳನ್ನೆಲ್ಲ ಆಯಾ ಕಾಲಘಟ್ಟದ ಹಿನ್ನೆಲೆಯಲ್ಲಿಯೇ ನೋಡಿ, ಮೂಲ ಆಶಯಗಳನ್ನು ಗ್ರಹಿಸಿ, ವರ್ತಮಾನದ ಬದುಕು-ಭಾವಗಳಿಗೆ ಪುಷ್ಟಿಯನ್ನು ಪಡೆಯಬೇಕು ಎನ್ನುವುದು ಮತ್ತೊಂದು ಮತ.

ಈ ಎರಡು ಅಭಿಪ್ರಾಯಗಳೂ ಭಿನ್ನ ಭಿನ್ನ ಸಾಂಸ್ಕೃತಿಕ-ರಾಜಕೀಯ ನೆಲೆಯಿಂದ ಹೊರಹೊಮ್ಮಿದವುಗಳಾದುದರಿಂದ, ಇವುಗಳಲ್ಲಿ ಯಾವುದನ್ನು ಅವಲಂಬಿಸಬೇಕು ಎನ್ನುವುದು ಸಾಮಾನ್ಯರನ್ನು ಕಾಡುವ ದ್ವಂದ್ವ. ಪ್ರಾಚೀನ ಸಾಹಿತ್ಯಕೃತಿಗಳ ಮರು-ನಿರೂಪಣೆಯೆಂಬುದು ಇಂದು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದ ರಾಜಕೀಯ ನೆಲೆಗಳಿಂದ ಹೊಸ ಹೊಸ ರೂಪಗಳಲ್ಲಿ ನಡೆಯುತ್ತ, ಸಮಾಜವನ್ನೂ ನೇತ್ಯಾತ್ಮಕವಾಗಿ ಪ್ರಭಾವಿಸುತ್ತಿರುವುದರಿಂದ ಜನಸಾಮಾನ್ಯರ ಸಂದಿಗ್ಧತೆ ಗಾಢವಾಗುತ್ತ ಸಾಗುತ್ತಿರುವುದು ಅನುಭವವೇದ್ಯ.

ಇಂಥ ಹೊತ್ತಿನಲ್ಲಿ, ಪ್ರಾಚೀನ ಸಾಹಿತ್ಯಗಳ ಮೂಲ ಆಶಯಗಳಿಗೆ ಧಕ್ಕೆಯಾಗದಂಥ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಹರಿವನ್ನೂ ಗಾಸಿಗೊಳಿಸದಂಥ, ವರ್ತಮಾನದ ಸಾಹಿತ್ಯ-ಕಲಾಪ್ರಕಾರಗಳನ್ನು ಮುನ್ನೆಲೆಗೆ ತರಬೇಕಾದ, ತನ್ಮೂಲಕ ಗೊಂದಲಕ್ಕೊಳಗಾಗುತ್ತಿರುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕಾದ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಾದರಿಯಾಗಬಹುದಾದ ನಾಟಕಗಳ ಸಂಕಲನವೇ ‘ಮಂತ್ರಸಂತಾನ ಮತ್ತು ಮೂರು ನಾಟಕಗಳು’.

ಕೃತಿಯ ಪ್ರಮುಖ ಅಂಶಗಳು:

ಒಟ್ಟು ನಾಟಕಗಳು: ಈ ಸಂಕಲನದಲ್ಲಿ ಒಟ್ಟು ನಾಲ್ಕು ನಾಟಕಗಳಿವೆ.

ಕಥಾವಸ್ತು: ‘ಶಿವಪುರಾಣ’ದಿಂದ ಆಯ್ದ ಕಥಾವಸ್ತು – ‘ಕಾರ್ತಿಕೇಯ’, ಹಾಗೂ ಮಹಾಭಾರತದಿಂದ ಆಯ್ದುಕೊಂಡ ಮೂರು ಸಂದರ್ಭಗಳು ಇಲ್ಲಿ ನಾಟಕರೂಪ ಪಡೆದಿವೆ.

ವಿಶೇಷತೆ: ಮೂಲ ಆಕರಗಳ ಆಶಯಕ್ಕೆ ಧಕ್ಕೆ ಬಾರದಂತೆ ರಚಿಸಲ್ಪಟ್ಟಿರುವ ಈ ನಾಟಕಗಳ ಸಂಭಾಷಣೆಗಳು ಸೂಕ್ಷ್ಮ ಒಳನೋಟಗಳಿಂದ ಕೂಡಿದ್ದು, ವರ್ತಮಾನದ ಆಗುಹೋಗುಗಳಿಗೆ ಬೆಳಕು ಚೆಲ್ಲುವಂತಿವೆ.

How should the ‘modern’ generation perceive, interpret, and grasp the essence of great epics like the Ramayana, Mahabharata, and the Puranas? We often face two contrasting views: one suggests re-narrating these ancient texts solely through the lens of contemporary social, cultural, and political paradigms. The other advocates understanding them in their original historical context, grasping their true essence, and drawing nourishment for our present lives.

Since these two approaches stem from entirely different socio-political grounds, the common man is often left in a dilemma. Today, many modern re-narrations of ancient texts are driven by political narratives that contradict the core of Indian cultural heritage, negatively impacting society and deepening this confusion.

In such times, there is a profound need for literary and artistic works that bring ancient wisdom to the forefront without distorting its core essence or damaging the continuity of Indian traditions. These works must serve as a guiding light for a confused generation. ‘Mantrasanthana Mattu Mooru Natakagalu’ is an exemplary collection of plays created to fulfill this exact purpose.

Key Highlights of the Book:

Collection of Four Plays: The book comprises a total of four thought-provoking plays.

Mythological Themes: It features ‘Kartikeya’, a play inspired by the Shiva Purana, alongside three plays based on profound situations from the Mahabharata.

Contemporary Relevance: While strictly preserving the sanctity and intent of the original texts, the dialogues in these plays are layered with subtle insights that offer profound reflections on contemporary life and its challenges.

Specification

Additional information

Weight 266 g
Dimensions 20.9 × 14 × 1.4 cm
author-name

book-no

172

isbn

9789393991249

language

Kannada

no-of-pages

194

published-date

April 2025

Main Menu

ಮಂತ್ರಸಂತಾನ ಮತ್ತು ಮೂರು ನಾಟಕಗಳು | Mantrasanthana Mattu Mooru Natakagalu | ದಿವಾಕರ ಹೆಗಡೆ

ಮಂತ್ರಸಂತಾನ ಮತ್ತು ಮೂರು ನಾಟಕಗಳು | Mantrasanthana Mattu Mooru Natakagalu | ದಿವಾಕರ ಹೆಗಡೆ

198.00220.00 (-10%)

Add to Cart