1948 ಬ್ರಾಹ್ಮಣರ ನರಮೇಧ (ಚಿತ್ಪಾವನ ಬ್ರಾಹ್ಮಣರ ಇತಿಹಾಸ ಮತ್ತು ಹತ್ಯಾಕಾಂಡ) | ವಿಜಯಾ ವಿಷ್ಣುಭಟ್
₹280.00
ಪುಸ್ತಕದ ಹೆಸರು: 1948 ಬ್ರಾಹ್ಮಣರ ನರಮೇಧ
ಲೇಖಕರು: ವಿಜಯಾ ವಿಷ್ಣುಭಟ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
1948ರ ಚಿತ್ಪಾವನ ಬ್ರಾಹ್ಮಣರ ಮೇಲಿನ ಹತ್ಯಾಕಾಂಡ ಮತ್ತು ಇತಿಹಾಸವನ್ನು ದಾಖಲಿಸಿದ ಕನ್ನಡದ ಮೊಟ್ಟಮೊದಲ ಕೃತಿ. ಅಂದಿನ ಮಾಧ್ಯಮಗಳು ಚಕಾರವೆತ್ತದ, ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟ ಅಮಾನುಷ ದೌರ್ಜನ್ಯಗಳ ಕರಾಳ ಚಿತ್ರಣವನ್ನು ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
Description
1948ರ ಚಿತ್ಪಾವನ ಬ್ರಾಹ್ಮಣ ಸಮುದಾಯದ ಹಾಗೂ ಇತರ ಬ್ರಾಹ್ಮಣರ ನರಮೇಧ ಯಾರ ಕಿವಿಗೂ ಬೀಳಲಿಲ್ಲ, ಕಣ್ಣಿಗೂ ಕಾಣಿಲಿಲ್ಲ. ಸಾವಿರಾರು ಜನರು ಮಾತ್ರ ವಿನಾಕಾರಣ ಅಮಾನುಷವಾದ ಹಲ್ಲೆ, ಕೊಲೆ, ಸುಲಿಗೆ, ಅತ್ಯಾಚಾರಕ್ಕೀಡಾದರು. ಅವರು ಮಾಡಿದ್ದ ಒಂದೇ ಅಪರಾಧ – ಬ್ರಾಹ್ಮಣರಾಗಿ ಹುಟ್ಟಿದ್ದು!
ಅಂದಿನ ಭಾರತೀಯ ಮಾಧ್ಯಮಗಳು ಇದರ ಬಗ್ಗೆ ಚಕಾರ ಎತ್ತಲಿಲ್ಲ. ಈ ನರಮೇಧಗಳಲ್ಲಿ ಕೆಲವಕ್ಕೆ ಮಾತ್ರ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಭಾಗ್ಯ! ಉಳಿದವು ಎಲ್ಲೋ ಮರೆಯಾಗಿ, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟಿವೆ.
ಪಾಠ ಹೇಳಿದ್ದ ಶಿಕ್ಷಕರು, ಪೂಜೆ ಮಾಡಿ ತೀರ್ಥ ಪ್ರಸಾದ ನೀಡಿದ್ದ ಅರ್ಚಕರು, ಏನೂ ತೆಗೆದುಕೊಳ್ಳದೆ ಔಷಧ ನೀಡಿ ಕಾಯಿಲೆ ಗುಣಪಡಿಸಿದ್ದ ವೈದ್ಯರು, ಕಷ್ಟಕಾಲಕ್ಕೆ ಹಣಸಹಾಯ ಮಾಡಿದ್ದ ಉದಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ದೊಡ್ಡದೊಡ್ಡ ಉದ್ಯಮಿಗಳು—ಹೀಗೆ ಯಾರನ್ನೂ ಬಿಡಲಿಲ್ಲ. ಎಲ್ಲರನ್ನೂ ಹಿಡಿದು, ಹೊಡೆದು ಕೊಂದರು. ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದರು, ಲೂಟಿ ಮಾಡಿದರು.
ಈ ಜನಮಾನಸದಿಂದ ಹೊರಗೆ ಉಳಿದಿದ್ದ ಇಂಥ ಘೋರ, ಹೇಯ ಹತ್ಯಾಕಾಂಡವನ್ನು ಕುರಿತು ಕನ್ನಡದಲ್ಲಿ ಇದೇ ಮೊದಲ ಪುಸ್ತಕ ಎನ್ನಬಹುದು. ಇತಿಹಾಸದ ಈ ಕರಾಳ ಸತ್ಯವನ್ನು ಪ್ರತಿಯೊಬ್ಬರೂ ತಿಳಿಯಲೇಬೇಕಾದ ಅಗತ್ಯವಿದೆ.
ಪುಸ್ತಕದ ಪ್ರಮುಖ ಅಂಶಗಳು:
-
1948ರ ಚಿತ್ಪಾವನ ಬ್ರಾಹ್ಮಣರ ಹತ್ಯಾಕಾಂಡದ ಸಮಗ್ರ ಮಾಹಿತಿ.
-
ಮಾಧ್ಯಮಗಳು ಮತ್ತು ಸಮಾಜ ಮರೆತ/ಮರೆಮಾಚಿದ ಸತ್ಯದ ಸ್ಪಷ್ಟ ದಾಖಲೆ.
-
ಈ ವಿಷಯದ ಕುರಿತು ಪ್ರಕಟಗೊಂಡಿರುವ ಕನ್ನಡದ ಪ್ರಪ್ರಥಮ ಕೃತಿ.
Specification
Additional information
| Weight | 304 g |
|---|---|
| Dimensions | 21 × 13.9 × 1.4 cm |
| author-name | |
| language | Kannada |
| no-of-pages | 255 |












