Description
‘ಕ್ರಿಯಾಕಲ್ಪ‘ವು ಸಾಹಿತ್ಯ, ಕಾವ್ಯಮೀಮಾಂಸೆ ಮತ್ತು ವೇದಾಂತಗಳಿಗೆ ಸಂಬಂಧಿಸಿದ ಎಂಟು ಪ್ರಬಂಧಗಳ ಸಂಚಯ. ಆಧುನಿಕ ಕನ್ನಡಸಾಹಿತ್ಯವನ್ನು ಶ್ರೀಮಂತಗೊಳಿಸಿದ ಡಿ.ವಿ.ಜಿ., ದೇವುಡು, ಕುವೆಂಪು ಅವರ ವಿಶಿಷ್ಟ ಕೃತಿಗಳ ವಿವೇಚನೆ ಇಲ್ಲಿ ಪ್ರಧಾನವಾಗಿ ಸಾಗಿದೆ. ಇಲ್ಲಿಯ ಬರೆಹಗಳು ಶ್ರೀರಾಮನ ಗುಣ ಗರಿಮೆಯಂತೆ ‘ಕಲಿಕಾಲಸರ್ವಜ್ಞ’ ಹೇಮಚಂದ್ರನ ಕಾವ್ಯ ಚಿಂತನವನ್ನೂ ವಿಶದಪಡಿಸುತ್ತವೆ; ಸಾ. ಕೃ. ರಾಮಚಂದ್ರರಾಯರು ರಚಿಸಿದ ವ್ಯಕ್ತಿಚಿತ್ರಗಳ ಸೊಬಗನ್ನು ಬಣ್ಣಿಸುವಂತೆ ಸಾಹಿತ್ಯಪರಿಚರ್ಯೆಯ ಮೂಲಕ ಚರಿತಾರ್ಥರಾದ ಎಂ. ವಿ. ವೆಂಕಟೇಶಮೂರ್ತಿಯವರ ವ್ಯಕ್ತಿತ್ವದ ಎತ್ತರವನ್ನೂ ಬಿತ್ತರಿಸುತ್ತವೆ. ಶತಾವಧಾನಿ ಆರ್. ಗಣೇಶರ ಕಥಾಸಂಕಲನ ಪುಟಗಳ ನಡುವಣ ನವಿಲುಗರಿ’ಯ ಸಹೃದಯಸಮೀಕ್ಷೆಯೂ ಇಲ್ಲಿದೆ. ಹೀಗೆ ಈ ಹೊತ್ತಗೆಯು ತನ್ನ ವಿಷಯವೈವಿಧ್ಯದಿಂದ ವಿಶಿಷ್ಟ ವೆನಿಸಿದೆ.






