• ಪರಿಸರ ಪರ | Parisara Para Kannada Book By Narayana Shevire

    ಪುಸ್ತಕದ ಹೆಸರು: ಪರಿಸರ ಪರ
    ಲೇಖಕರು: ನಾರಾಯಣ ಶೇವಿರೆ
    ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
    ಪರಿಸರ, ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ವೃಕ್ಷಾರೋಪಣ, ಪರಿಸರ ದಿನ ಆಚರಣೆ – ಹೀಗೆ ದಿನವೂ ಪರಿಸರ-ಸಂಬಂಧಿತ ಒಂದಲ್ಲ ಒಂದು ವಿಷಯ-ಸುದ್ದಿ ಕಿವಿಗೆ ಬೀಳುತ್ತಿರುವ ವರ್ತಮಾನದಲ್ಲಿ ನಮಗೆ ಅನುಸರಣೀಯವಾದ ದೃಷ್ಟಿ-ಧೋರಣೆ ಯಾವುದು?- ಎಂಬುದನ್ನು ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಅಂಥದ್ದೊಂದು ಚಿಂತನೆಗೆ ತೊಡಗಲು ಒದಗಿಬರಬಹುದಾದ, ಪರಿಸರ ಸಂಬಂಧಿತ, ಲೇಖನಗಳ ಸಂಕಲನ ‘ಪರಿಸರ ಪರ’.

    108.00120.00
  • ಪಾಠಶಾಲೆ | Patashale Kannada Book By Narayana Shevire

    ಪುಸ್ತಕದ ಹೆಸರು: ಪಾಠಶಾಲೆ
    ಲೇಖಕರು: ನಾರಾಯಣ ಶೇವಿರೆ
    ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
    ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.

     

    108.00120.00
  • Lalitavistara (Gautama Buddhana Jeevanagathe) | ಲಲಿತ ವಿಸ್ತರ (ಗೌತಮಬುದ್ಧನ ಜೀವನಗಾಥೆ)

    ಲಲಿತ ವಿಸ್ತರ (ಗೌತಮಬುದ್ಧನ ಜೀವನಗಾಥೆ)

    ಮೂಲ ಸಂಸ್ಕೃತ ಕೃತಿ
    ತೆಲುಗಿಗೆ: ತಿರುಮಲ ರಾಮಚಂದ್ರ, ಬುಲುಸು ವೆಂಕಟರಮಣಯ್ಯ
    ಕನ್ನಡಕ್ಕೆ: ಡಾ. ಆರ್‌. ಶೇಷಶಾಸ್ತ್ರಿ
    ಪ್ರಕಟಣೆ: ದಿವ್ಯಾ ಪ್ರಕಾಶನ

    ಈ ಆವೃತ್ತಿಯಲ್ಲಿ ಸಂಸ್ಕೃತ ಮೂಲಗ್ರಂಥದ ಆಳ ಮತ್ತು ಗೌರವವನ್ನು ಕಾಪಾಡಿಕೊಂಡು, ತೆಲುಗು ಭಾಷಾಂತರದ ಆಧಾರದಲ್ಲಿ ಡಾ. ಆರ್. ಶೇಷಶಾಸ್ತ್ರಿ ಅವರು ಕನ್ನಡಕ್ಕೆ ಸುಂದರವಾಗಿ ಅನುವಾದಿಸಿದ್ದಾರೆ.

    1,200.00
  • ಬದುಕುಳಿದವರು ಕಂಡಂತೆ: ವಿಶ್ವೇಶ್ವರ ಭಟ್‌ | Badukulidavaru Kandanthe By Vishweshwar Bhat (Kannada)

    ಪುಸ್ತಕದ ಹೆಸರು: ಬದುಕುಳಿದವರು ಕಂಡಂತೆ
    ಲೇಖಕರು: ವಿಶ್ವೇಶ್ವರ ಭಟ್‌
    ಪ್ರಕಾಶಕರು: ವಿಶ್ವವಾಣಿ ಪುಸ್ತಕ

    2023ರ ಅಕ್ಟೋಬರ್‌7ರಂದು ಹಮಾಸ್‌ಉಗ್ರರು ಇಸ್ರೇಲ್‌ಮೇಲೆ ನಡೆಸಿದ ಭಯಾನಕ ಹತ್ಯಾಕಾಂಡದಲ್ಲಿ ಬದುಕುಳಿದವರು ಹೇಳಿದ ಮನಮಿಡಿಯುವ, ರೋಚನ ಕಥನ ಈ ಪುಸ್ತಕದಲ್ಲಿದೆ. ಇದು ಮರೆಯಲಾಗದ ವೀರರ, ಊಹಿಸಲಾಗದ ಕಥೆಗಳು. ಇದು ಕೇವಲ ನೋವಿನ ಕಥೆಗಳಲ್ಲ, ಪ್ರತಿ ಕಠಿಣ ಸವಾಲನ್ನು ಎದುರಿಸಿ ನಿಂತ ಮಾನವ ಚೇತನದ ಸ್ಫೂರ್ತಿಯ ಸೆಲೆ. ಇದು ಯಾರೋ ಹೇಳಿದ ಗೋಳಿನ ಕಥೆಯಲ್ಲ. ಇದು ಒಂದು ಹತ್ಯಾಕಾಂಡದ ಡಾರ್ಕ್ ಡೈರಿ.

    450.00
  • ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)

    ಪುಸ್ತಕದ ಹೆಸರು: ಪುನರುತ್ಥಾನ
    ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
    ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್‌
    ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ

    ಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.

    270.00300.00
  • Kumaravyasa Bharata | ಕುಮಾರವ್ಯಾಸ ಭಾರತ- ತಾತ್ಪರ್ಯ ಸಹಿತ | ಸಂಪಾದಕರು: ಅ. ರಾ. ಸೇತುರಾಮರಾವ್

    ಸಂಪಾದಕರು: ಅ. ರಾ. ಸೇತುರಾಮರಾವ್
    ಪ್ರಕಾಶಕರು: ಕಾಮಧೇನು ಪುಸ್ತಕ ಭವನ
    ಚಿತ್ರಕಲಾವಿದರು: ಗಂಜೀಫಾ ರಘುಪತಿ ಭಟ್
    ಕೃತಿ: Kumaravyasa Bharata (ಕನ್ನಡ) – ತಾತ್ಪರ್ಯ ಸಹಿತ

    2,750.00
  • Economic Ideas and Thoughts of Dadabhai Naoroji By M M Gupta

    Book Name: Dadabhai Naoroji
    Author: M M Gupta
    Publisher: Rashtrotthana Sahitya

    This insightful book explores the economic policies introduced during the British rule and the devastating effects these policies had on India’s traditional industries, wealth, and social fabric. Written with clarity and backed by historical evidence, the book highlights how British economic agendas—shaped to strengthen their expanding European empires—crippled India’s flourishing economy.

    270.00300.00
  • ಅಗ್ನಿಪರೀಕ್ಷೆ- ಆರ್‌ಎಸ್‌ಎಸ್‌ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)

    ಪುಸ್ತಕ ಹೆಸರು: ಅಗ್ನಿಪರೀಕ್ಷೆ
    ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
    ಕನ್ನಡಾನುವಾದ: ಚಂದ್ರಶೇಕರ ಭಂಡಾರಿ
    ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರು

    ಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.

    100.00
  • ಅಂತರಂಗ-ತರಂಗ | ಕಾ.ಶ್ರೀ. ನಾಗರಾಜ.

    ಪುಸ್ತಕದ ಹೆಸರು: ಅಂತರಂಗ-ತರಂಗ
    ಲೇಖಕರು: ಕಾ. ಶ್ರೀ. ನಾಗರಾಜ
    ಪ್ರಕಾಶಕರು: ಶ್ರೀ ಹರಿಪ್ರಕಾಶ ಕೋಣೆಮನೆ

    ಭಾರತದೇಶದಲ್ಲಿ ತುರ್ತು ಅವಶ್ಯವಾಗಿರುವ ಹಿಂದುಸಂಘಟನೆಯನ್ನು ಸಾಂಗಗೊಳಿಸಿದ ಸಂಸ್ಥೆಗಳ ಪೈಕಿ ಪ್ರಮುಖವಾದದ್ದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ನಾಗಪುರ ನಿವಾಸಿ ಕೇಶವ ಬಲಿರಾಮ ಹೆಡಗೇವಾ‌ರ್ ಸ್ಥಾಪಿಸಿದ ಈ ಸಂಘಕ್ಕೀಗ 100ರ ಹರೆಯ. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರಣೀಯ ಸರಸಂಘಚಾಲಕರ ಆಪ್ತನುಡಿಗಳನ್ನು ಸಂಗ್ರಹಿಸಿ ಅಂತರಂತ-ತರಂಗ ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ ಲೇಖಕ ಕಾ.ಶ್ರೀ. ನಾಗರಾಜ.

    60.00
  • ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ

    ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
    ಲೇಖಕರು: ಮಂಜುನಾಥ ಅಜ್ಜಂಪುರ
    ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ

    ಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.

    144.00160.00
  • ಸಮಾಜಕಾರ್ಯ ಸಂಹಿತೆ | ಎಸ್‌. ಆರ್‌. ರಾಮಸ್ವಾಮಿ

    ಪುಸ್ತಕದ ಹೆಸರು: ಸಮಾಜಕಾರ್ಯ ಸಂಹಿತೆ
    ಸಂಪಾದಕರು: ಎಸ್‌. ಆರ್‌. ರಾಮಸ್ವಾಮಿ
    ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ

    ಸಮಾಜಕಾರ್ಯ ಎಂದರೆ ಏನು? ಭಾರತೀಯ ಪರಂಪರೆಯಲ್ಲಿ ಈ ಕಲ್ಪನೆಯ ವ್ಯಾಪ್ತಿ ವಿಸ್ತಾರ ಏನು? ಭಾರತೀಯ ಸಂಸ್ಕೃತಿ ಸೇವೆ ಎಂಬುದನ್ನು ಕರ್ತವ್ಯದ ಪರಿಧಿಯೊಳಗೆ ಅಳವಡಿಸಿದುದರ ಹಿನ್ನೆಲೆ ಏನು? ಸಾಮಾಜಿಕ ಕಾರ್ಯಕರ್ತನ ಮಾನಸಿಕತೆ ಹೇಗಿರಬೇಕು ಇವೇ ಮೊದಲಾದ ತಾತ್ತ್ವಿಕ ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಅವಶ್ಯಕ. ಅದಕ್ಕೆ ಪೂರಕವಾಗಿ ಒದಗಿಬರಬಲ್ಲ ಕೈಪಿಡಿ ಸಮಾಜಕಾರ್ಯ ಸಂಹಿತೆ.

    108.00120.00
  • Importance of Rewriting Our Distorted Indian History – By Manjunatha Ajjampura

    A powerful and concise book that exposes how colonial rulers and later Marxist scholars distorted India’s history. Written by Manjunatha Ajjampura, this work urges readers to rediscover true Indian history based on evidence, inscriptions, scriptures, and cultural heritage.

    90.00100.00
  • ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟು ಬೆರಗು – ದೀಕ್ಷಿತ್‌ ನಾಯರ್‌

    ಪುಸ್ತಕದ ಹೆಸರು: ಎತ್ತರೆತ್ತರ ಭೈರಪ್ಪ; ಅಗೆದಷ್ಟೂ ಆಳ ಮೊಗೆದಷ್ಟು ಬೆರಗು
    ಲೇಖಕರು: ದೀಕ್ಷಿತ್‌ ನಾಯರ್‌
    ಪ್ರಕಾಶನ: ಸ್ನೇಹ ಬುಕ್‌ ಹೌಸ್‌

    ಭೈರಪ್ಪನವರು ಬದುಕಿದಂತೆ ಬರೆದ ಮತ್ತು ಬರೆದಂತೆ ಬದುಕಿದ ಅಪರೂಪದ ಸಾಹಿತಿ. ಬದುಕಿನ ಕಡೆಯ ದಿನಗಳವರೆಗೂ ತಮ್ಮಿಚ್ಛೆಯಂತೆಯೇ ಬದುಕಿದವರು. ಬರವಣಿಗೆಯನ್ನು ಬಿಟ್ಟು ಮತ್ತೇನನ್ನೂ ಅವರು ನೆಚ್ಚಿಕೊಳ್ಳಲಿಲ್ಲ. ಬರಹದಿಂದಲೇ ಅವರು ಗ್ಲೋಬಲ್‌ ಸ್ಟಾರ್‌ ಆದವರು. ನಾಡಿನ ಖ್ಯಾತ ಸಾಹಿತಿ ಭೈರಪ್ಪನವರು ತಮ್ಮ ಬದುಕಿನ ಆರಂಭದ ದಿನಗಳಿಂದ ಕೊನೆಯವರೆಗೂ ಹೇಗೆಲ್ಲಾ ಬದುಕಿದ್ದರು, ಅವರು ಮಾಡಿದ ಮಹತ್‌ಕಾರ್ಯಗಳೇನು, ದೇಣಿಗೆ ಕೊಡುಗೆಗಳೇನು, ಅವರ ಬರಹಗಳು, ಹವ್ಯಾಸ ಏನೇನಿತ್ತು ಎಂಬಿತ್ಯಾದಿ ಭೈರಪ್ಪನವರ ಬದುಕಿನ ಚಿತ್ರಣವನ್ನು ತೆರೆದಿಡುವ ಪುಸ್ತಕವೇ ಈ ಎತ್ತರೆತ್ತರ ಭೈರಪ್ಪ.

    175.00
  • ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್‌. ಆರ್‌. ರಾಮಸ್ವಾಮಿ

    ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
    ಲೇಖಕರು: ಎಸ್‌.ಆರ್‌. ರಾಮಸ್ವಾಮಿ
    ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘

    ‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.

    108.00120.00
  • ಮಹಾಭಾರತ ಪಾತ್ರಾನುಸಂಧಾನ

    ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
    ಲೇಖಕರು: ಶಿಕಾರಿಪುರ ಈಶ್ವರ ಭಟ್‌
    ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
    ಮುದ್ರಣ: ಎರಡನೇ ಮುದ್ರಣ

    ಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.

    150.00
  • ಉಪನಿಷತ್‌ ದರ್ಶನ

    ಪುಸ್ತಕದ ಹೆಸರು: ಉಪನಿಷತ್‌ ದರ್ಶನ
    ಲೇಖಕರು: ಶಿಕಾರಿಪುರ ಈಶ್ವರ ಭಟ್‌
    ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
    ಮುದ್ರಣ: ತೃತೀಯ ಮುದ್ರಣ

    ಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್‌ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.

    100.00

Main Menu