ವೈದಿಕ ಭೌತಶಾಸ್ತ್ರ-೩
₹525.00₹575.00 (-9%)
ಬೋಧಿಸಿದವರು ಬ್ರಹ್ಮ ಋಷಿ ಕೆ ಎಸ್ ನಿತ್ಯಾನಂದ ಸ್ವಾಮೀಜಿ
ಲೇಖಕರು – ಎಚ್ ಜಿ ನಾಗೇಶ್
Description
ಈ ಸಕಲ ಚರಾಚರಾತ್ಮಕ ಪ್ರಕೃತಿ ಜೊತೆಯಲ್ಲಿ ಈ ಭುವನಮಂಡಲ ನವಗ್ರಹಾದಿಗಳು ಸೇರಿ ಈ ಖಗೋಲ ಮತ್ತು ಇದರಂತೆಯೇ ಜೀವಪ್ರಭೇದ ವ್ಯತ್ಯಾಸ ಹೊಂದಿ ಅಸ್ತಿತ್ವದಲ್ಲಿರುವ ಇನ್ನಿತರೇ ಹದಿಮೂರು ಲೋಕಗಳ ಸಮಗ್ರ ಅಧ್ಯಯನ, ಜೈವಿಕ ಅಭಿವೃದ್ಧಿ, ಉನ್ನತಿ, ಸಾಧನೆ, ಆತ್ಮೋಜೀರ್ಣೋದ್ಧಾರ, ರಕ್ಷಣೆ, ಆಹಾರಪೂರೈಕೆ, ವಿಹಾರ, ಪ್ರಜ್ಞೆ, ಜ್ಞಾನವೃದ್ಧಿ ಸಹಿತವಾದ ಹಲವು ಮುಖದಲ್ಲಿ ನಡೆದ ಅಧ್ಯಯನ ವಿಷಯಗಳನ್ನೊಳಗೊಂಡ, ಅಲ್ಲದೆ ಆ ಸಂಬಂಧೀ ವಿಶೇಷ ತಂತ್ರಜ್ಞಾನ, ಅಸ್ತ್ರ, ಶಸ್ತ್ರ, ಯಂತ್ರ, ಮಾತೃಕಾ, ಬೀಜ, ಕೀಲಕ, ನ್ಯಾಸ, ಪ್ರಯೋಗ, ಉಪಸಂಹಾರ ಸಹಿತವಾಗಿ ಅಧ್ಯಯನ ನಡೆಸಿದ ವರದಿ, ವಿವರಣೆಯುಕ್ತವಾಗಿದ್ದು ಸಕಲ ಜೀವಕೋಟಿಯ ಕ್ಷೇಮಾಭ್ಯುದಯ ಹಾರೈಕೆಯನ್ನೂ ಒಳಗೊಂಡ ವಿವರಣಾತ್ಮಕ ಸಂಶೋಧನಾ ಗ್ರಂಥವೇ ವೇದ.
ವೇದಗಳ ಬಗ್ಗೆ ಇಷ್ಟು ನಿಖರವಾಗಿ ಹೇಳಲು ಬಹಳ ಮತ್ತು ದೀರ್ಘವಾದ, ಆಳವಾದ ಅಧ್ಯಯನವಿರಲೇಬೇಕು. ಬನ್ನಿ…..ಪ್ರಸ್ತುತ ಕೃತಿಯಲ್ಲಿ ಬ್ರಹ್ಮ ಋಷಿ ಕೆ ಎಸ್ ನಿತ್ಯಾನಂದ ಸ್ವಾಮೀಜಿಯವರು ಬರೆದ ಅಪೂರ್ವ ವೈಧಿಕ ಚಿಂತನೆಗಳು ಇವೆ.