ಯಾವುದು ಚರಿತ್ರೆ ?
₹375.00₹395.00 (-5%)
ಎಂ ವಿ ಆರ್ ಶಾಸ್ತ್ರಿ – ಬಾಬು ಕೃಷ್ಣಮೂರ್ತಿ
Description
ನಾವೆಲ್ಲ ಇದುವರೆಗೆ ತಿಳಿದುಕೊಂಡು ಬಂದಿರುವ ಇತಿಹಾಸ ಜ್ಞಾನವನ್ನು ಹೊಡೆದುರುಳಿಸುತ್ತ ಕಾಲಗರ್ಭದಲ್ಲಿ ಅಡಗಿರುವ ನಮ್ಮ ದೇಶದ ಇತಿಹಾಸವನ್ನು ಪುರಾವೆ ಸಮೇತ ಕೆದಕುವ ಅನೇಕ ಸಂಗತಿಗಳು ಈ ಸಂಶೋಧನಾ ಗ್ರಂಥದಲ್ಲಿವೆ. ಕೆಲವು ಪ್ರಮುಖ ವ್ಯಕ್ತಿತ್ವಗಳನ್ನು ಕುರಿತು, ಪ್ರಮುಖ ಘಟನೆಗಳನ್ನು ಕುರಿತು ಬಹುಕಾಲದಿಂದ ವಿಚಾರವಂತರ ವರ್ಗದಲ್ಲಿ ಮನೆಮಾಡಿರುವ ಕೆಲವೇ ಕೆಲವಾದರೂ ತಪ್ಪು ಅಭಿಪ್ರಾಯಗಳನ್ನು ಅಳಿಸಿಹಾಕುವುದೇ ಈ ಬರವಣಿಗೆಯ ಉದ್ದೇಶ. ಇದನ್ನು ಓದಿದ ನಂತರ ನಮ್ಮ ದೇಶವನ್ನು ಕುರಿತು, ನಮ್ಮ ಪೂರ್ವಿಕರನ್ನು ಕುರಿತು, ರಾಷ್ಟ್ರೀಯ ವಾರಸುದಾರಿಕೆಯನ್ನು ಕುರಿತು ಒಂದಿಷ್ಟು ಅಭಿಮಾನ… ವಾಸ್ತವ ಚರಿತ್ರೆಯನ್ನು ಭ್ರಷ್ಟಗೊಳಿಸಿದ ಕುರುಡು, ಕಿವುಡು ಬುದ್ಧಿಜೀವಿ ವರ್ಗಗಳ ಬಗ್ಗೆ ಒಂದಿಷ್ಟು ಕ್ರೋಧ ಮತ್ತು ಇಂತಹ ಉಜ್ವಲ ಚರಿತ್ರೆಯುಳ್ಳ ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ಇದೆಯೆಂಬ ನಂಬಿಕೆ ಓದುಗರಿಗೆ ಉಂಟಾಗುವುದೆಂದು ಲೇಖಕರಿಗೆ ಭರವಸೆ.






