-
ಕಾರ್ಯಕರ್ತ | ದತ್ತೋಪಂತ ಠೇಂಗಡಿ | Karyakarta Kannada Book by Dattopant Thengadi | RSS Worker, Ideology & Methodology
ಪುಸ್ತಕದ ಹೆಸರು: ಕಾರ್ಯಕರ್ತ
ಲೇಖಕರು: ದತ್ತೋಪಂತ ಠೇಂಗಡಿ
ಪ್ರಕಾಶಕರು: ಸಾಹಿತ್ಯ ಸಂಗಮ
ಈ ಪುಸ್ತಕದಲ್ಲಿ ಸಂಕಲಿತವಾಗಿರುವ ವಿಚಾರದ ಕೇಂದ್ರಬಿಂದುವಾಗಿರುವವನು ʼರಾಷ್ಟ್ರೀಯ ಸ್ವಯಂಸೇವಕ ಸಂಘʼದ ಕಾರ್ಯಕರ್ತ. ಆದರೆ ಅವನು ಅರಳುವುದು ನಮ್ಮ ಕೆಲಸದ ಅಧಿಷ್ಠಾನದಿಂದ ಪ್ರೇರಣೆ ಪಡೆದು ಮತ್ತು ಕಾರ್ಯಪದ್ಧತಿಯ ಬಿಗಿಯಾದ ಅನುಶಾಸನದಿಂದ ತೀಡಲ್ಪಡುವ ಮೂಲಕ. ಮುಂದೆ ಅದೇ ಕಾರ್ಯಪದ್ಧತಿಯಲ್ಲಿ ಶಕ್ತಿ ತುಂಬಿ ಗುರಿಪ್ರಾಪ್ತಿಯ ಉದ್ದೇಶಸಹಿತ ಅವನು ಮುನ್ನಡೆಯುತ್ತಾನೆ. ಇದನ್ನು ಲಕ್ಷ್ಯದಲ್ಲಿರಿಸಿ ʼಅಧಿಷ್ಠಾನʼ ಮತ್ತು ʼಕಾರ್ಯಪದ್ಧತಿʼ ಎಂಬ ಎರಡು ವಿಷಯಸೂತ್ರಗಳ ಜತೆ ಕಾರ್ಯಕರ್ತ ಎಂಬ ವಿಷಯವನ್ನೂ ಇಲ್ಲಿ ಸಮಗ್ರವಾಗಿ ಸಂಕಲಿತಗೊಳಿಸಲಾಗಿದೆ.₹120.00 -
ಗಾನಮಾಲಾ | Ganamala Songs Collections of RSS
ಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
₹100.00 -
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya – The Ideal RSS Pracharak: Life and Legacy of N. Krishnappa
ಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.₹150.00 -
ನೆನಪೇ ಸಂಗೀತ ಕನ್ನಡ ಪುಸ್ತಕ | Nenape Sangeetha – Kannada Book | Life Story of Singer Vidyabhushana
ಪುಸ್ತಕದ ಹೆಸರು: ನೆನಪೇ ಸಂಗೀತ
ಲೇಖಕರು: ವಿದ್ಯಾಭೂಷಣ
ಪ್ರಕಾಶಕರು: ಉದ್ಗೀಥ ಪ್ರಕಾಶನ
ಕನ್ನಡ ನಾಡಿನ ಖ್ಯಾತ ಗಾಯಕ ವಿದ್ಯಾಭೂಷಣರ ಜೀವನ ಕಥನ ಹೊಂದಿರುವ ಪುಸ್ತಕವಿದು. ವಿದ್ಯಾಭೂಷಣರ ಬಾಲ್ಯಕಾಲ, ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮೊದಲಿನ ದಿನಗಳು, ಒಲ್ಲದ ಸನ್ಯಾಸ, ವಿಷಮ ಪರಿಸ್ಥಿತಿಯ ದಿನಗಳು, ಆಶ್ರಮ ತ್ಯಾಗದ ಹಿಂದಿನ ತಳಮಳಗಳು ಹೀಗೆ ಅವರ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುವ ಪುಸ್ತಕ ನೆನಪೇ ಸಂಗೀತ.
₹220.00 -
-
-
-
ಮಹಾಭಾರತ ಪಾತ್ರಾನುಸಂಧಾನ
ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ಎರಡನೇ ಮುದ್ರಣಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.
₹150.00ಮಹಾಭಾರತ ಪಾತ್ರಾನುಸಂಧಾನ
₹150.00 -
-
ಮುಚ್ಚಿಟ್ಟ ದಲಿತ ಚರಿತ್ರೆ
ಅಂಬೇಡ್ಕರ್ ಮತ್ತು ಮಂಡಲ್ ಹೇಳಿದ ಇಸ್ಲಾಂ ಕುರಿತ ಸತ್ಯಗಳು
₹150.00ಮುಚ್ಚಿಟ್ಟ ದಲಿತ ಚರಿತ್ರೆ
₹150.00 -
Shop By Category















