-
ಕಾರ್ಯಕರ್ತ | ದತ್ತೋಪಂತ ಠೇಂಗಡಿ | Karyakarta Kannada Book by Dattopant Thengadi | RSS Worker, Ideology & Methodology
ಪುಸ್ತಕದ ಹೆಸರು: ಕಾರ್ಯಕರ್ತ
ಲೇಖಕರು: ದತ್ತೋಪಂತ ಠೇಂಗಡಿ
ಪ್ರಕಾಶಕರು: ಸಾಹಿತ್ಯ ಸಂಗಮ
ಈ ಪುಸ್ತಕದಲ್ಲಿ ಸಂಕಲಿತವಾಗಿರುವ ವಿಚಾರದ ಕೇಂದ್ರಬಿಂದುವಾಗಿರುವವನು ʼರಾಷ್ಟ್ರೀಯ ಸ್ವಯಂಸೇವಕ ಸಂಘʼದ ಕಾರ್ಯಕರ್ತ. ಆದರೆ ಅವನು ಅರಳುವುದು ನಮ್ಮ ಕೆಲಸದ ಅಧಿಷ್ಠಾನದಿಂದ ಪ್ರೇರಣೆ ಪಡೆದು ಮತ್ತು ಕಾರ್ಯಪದ್ಧತಿಯ ಬಿಗಿಯಾದ ಅನುಶಾಸನದಿಂದ ತೀಡಲ್ಪಡುವ ಮೂಲಕ. ಮುಂದೆ ಅದೇ ಕಾರ್ಯಪದ್ಧತಿಯಲ್ಲಿ ಶಕ್ತಿ ತುಂಬಿ ಗುರಿಪ್ರಾಪ್ತಿಯ ಉದ್ದೇಶಸಹಿತ ಅವನು ಮುನ್ನಡೆಯುತ್ತಾನೆ. ಇದನ್ನು ಲಕ್ಷ್ಯದಲ್ಲಿರಿಸಿ ʼಅಧಿಷ್ಠಾನʼ ಮತ್ತು ʼಕಾರ್ಯಪದ್ಧತಿʼ ಎಂಬ ಎರಡು ವಿಷಯಸೂತ್ರಗಳ ಜತೆ ಕಾರ್ಯಕರ್ತ ಎಂಬ ವಿಷಯವನ್ನೂ ಇಲ್ಲಿ ಸಮಗ್ರವಾಗಿ ಸಂಕಲಿತಗೊಳಿಸಲಾಗಿದೆ.₹120.00 -
ಉತ್ತುಂಗ | ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ | Uttunga | The Inspiring Life Portrait of K. Suryanarayana Rao
ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.₹200.00 -
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya – The Ideal RSS Pracharak: Life and Legacy of N. Krishnappa
ಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.₹150.00 -
ಗಾನಮಾಲಾ | Ganamala Songs Collections of RSS
ಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
₹100.00 -
ಹಿಂದುತ್ವ: ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ | Hindutva: Relevance and Reality in the Modern World (Kannada Book)
ಪುಸ್ತಕದ ಹೆಸರು: ಹಿಂದುತ್ವ
ಲೇಖಕರು: ಡಾ. ಮೋಹನ್ ಭಾಗವತ್, ಶ್ರೀ ಸುರೇಶ್ ಸೋನಿ, ಶ್ರೀ ಅರುಣ್ ಕುಮಾರ್
ಪ್ರಕಾಶಕರು: ಸಾಹಿತ್ಯ ಸಂಗಮ
ಇಂದು ಜಗತ್ತನ್ನು ಸಾಮಾಜಿಕ, ಪಾಂಥಿಕ, ಆರ್ಥಿಕ, ಪಾರಿಸಾರಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ತಿತ್ವದ ಬಿಕ್ಕಟ್ಟುಗಳಿಗೆ (Existential Problems) ಪರಿಹಾರವನ್ನು ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ಈ ಸಾಮರ್ಥ್ಯದ ಬಗ್ಗೆ ಭಯಭೀತರಾಗಿರುವ ಅನೇಕ ಸ್ವಾರ್ಥಿ, ಸಂಕುಚಿತ ಮನಸ್ಸಿನ ಜನರು ಇದನ್ನು ವಿರೋಧಿಸುವುದಷ್ಟೇ ಅಲ್ಲದೆ, ಇದನ್ನು ಕಳಂಕಿತಗೊಳಿಸಲು ಅಪಪ್ರಚಾರದಲ್ಲೂ ತೊಡಗಿದ್ದಾರೆ. ‘ಮೂಲಭೂತವಾದಿ’, ‘ಪುರಾಣಪಂಥಿ’, ‘ಅಂಧವಿಶ್ವಾಸಿ’, ‘ಪಿತೃಪ್ರಧಾನ’, ‘ಪ್ರತಿಗಾಮಿ’, ‘ಭೇದಭಾವ’ವುಳ್ಳದ್ದು, ‘ಜಾತಿವಾದಿ’ ಮುಂತಾದ ಭ್ರಾಮಕ ವಿಶೇಷಣಗಳನ್ನು ಉಪಯೋಗಿಸಿ ಅಪಪ್ರಚಾರ ಮಾಡುವ ಪ್ರಯತ್ನವನ್ನು ಈ ವಿಘಟನಕಾರಿ ಶಕ್ತಿಗಳು ಸತತವಾಗಿ ಮಾಡುತ್ತಿವೆ.₹50.00 -
ಅಗ್ನಿಪರೀಕ್ಷೆ- ಆರ್ಎಸ್ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)
ಪುಸ್ತಕ ಹೆಸರು: ಅಗ್ನಿಪರೀಕ್ಷೆ
ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
ಕನ್ನಡಾನುವಾದ: ಚಂದ್ರಶೇಕರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರುಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.
₹100.00
Shop By Category





